CrimeDistricts

ಪಿರಿಯಾಪಟ್ಟಣದಲ್ಲಿ ಮಹಿಳೆಯ ಭೀಕರ ಹತ್ಯೆ!; ವಿಮೆ ಹಣಕ್ಕಾಗಿ ನಡೆಯಿತಾ ಕೊಲೆ..?

ಮೈಸೂರು; ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಆಕೆಗೆ ಬಂದಿದ್ದ ವಿಮೆ ಹಣವನ್ನು ಲಪಟಾಯಿಸಿದ್ದಾರೆ.. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಚೌಥಿ ಗ್ರಾಮದ 32 ವರ್ಷದ ಭಾಗ್ಯವತಿ ಕೊಲೆಯಾದ ಮಹಿಳೆಯಾಗಿದ್ದಾರೆ.. ಹತ್ಯೆ ಮಾಡಿದ ಬಳಿಕ ಹಣ ಹಾಗೂ ಒಡವೆಯನ್ನು ಕಳವು ಮಾಡಲಾಗಿದೆ..

ಇದನ್ನೂ ಓದಿ; ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು!; ಸ್ಪೀಕರ್‌ರಿಂದ ಪರಿಶೀಲನೆ!

ಐದು ವರ್ಷದ ಹಿಂದೆ ಭಾಗ್ಯವತಿಯವರ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.. ಇತ್ತೀಚೆಗೆ ಮಹಿಳೆಗೆ ಗಂಡನ ವಿಮೆ ಹಣ ಬಂದಿತ್ತು.. ಈ ಬಗ್ಗೆ ತಿಳಿದಿದ್ದವರೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ.. ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ದೋಚಿಸಿದ್ದಾರೆ.. ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.. ಅನುಮಾನದ ಮೇಲೆ ಕೆಲ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!

Share Post