BengaluruCrime

ಯಾಕೋ ಗುರಾಯಿಸ್ತೀಯಾ ಅಂದಿದ್ದಕ್ಕೆ ನಡೆದೇ ಹೋಯ್ತು ಕೊಲೆ!

ಬೆಂಗಳೂರು; ಆತ ತನ್ನ ಪಾಡಿಗೆ ತಾನು ಸ್ನೇಹಿತರ ಜೊತೆ ನಡೆದುಕೊಂಡು ಹೋಗುತ್ತಿದ್ದ.. ಎದುರಿಗೆ ಬಂದ ವ್ಯಕ್ತಿಯೊಬ್ಬ ವಿನಾಕಾರಣ ಆತನನ್ನು ನೋಡಿ ಗುರಾಯಿಸಿದ್ದ.. ಹೋದರೆ ಹೋಯ್ತು ಅಂತ ಸುಮ್ಮನಾಗಿದ್ದಿದ್ದರೆ ಏನೂ ಆಗ್ತಿರಲಿಲ್ಲವೇನೋ.. ಆದ್ರೆ ಈತ ಕೂಡಾ ಯಾಕೋ ಗುರಾಯಿಸ್ತೀಯಾ ಅಂತ ಹೇಳಿದ್ದಾನೆ.. ಅಷ್ಟೇ ಇಬ್ಬರ ಮಧ್ಯೆ ಗಲಾಟೆ ತಾರಕಕ್ಕೇರಿ, ಗುರಾಯಿಸಿದವನು ಪ್ರಶ್ನೆ ಮಾಡಿದವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.. ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು.. ಆದ್ರೆ ಚಿಕಿತ್ಸೆ ಫಲಸದೇ ಆತ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಯ್ಸಳ ನಗರ 3ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.. ಮನೋಜ್‌ ಎಂಬ 22 ವರ್ಷದ ಯುವಕನೇ ಹತ್ಯೆಯಾದವನು.. ಘಟನೆ ಸಂಬಂಧ ಪೊಲೀಸರು ಈಗ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.. ತೀವ್ರ ವಿಚಾರಣೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಬಂದೂಕಿನಿಂದ ಪತ್ನಿಯನ್ನು ಗುಂಡಿಕ್ಕಿ ಕೊಂದ ವಿರಾಜಪೇಟೆಯ ವ್ಯಕ್ತಿ!

 

Share Post