CrimeNational

ತೆಲಂಗಾಣ ಚುನಾವಣೆ; ಸಂಸದ ಪ್ರಭಾಕರ ರೆಡ್ಡಿಗೆ ಚಾಕುವಿನಿಂದ ಇರಿತ

ಹೈದರಾಬಾದ್‌; ತೆಲಂಗಾಣ ಚುನಾವಣೆ ರಂಗೇರುತ್ತಿದೆ. ಇನ್ನು ರಕ್ತಸಿಕ್ತ ರಾಜಕೀಯಕ್ಕೂ ಇದು ಸಾಕ್ಷಿಯಾಗುತ್ತಿದೆ. ಬಿಆರ್​ಎಸ್ ಪಕ್ಷದ ಸಂಸದ ಹಾಗೂ ದುಬ್ಬಾಕ ವಿಧಾನಸಭಾ ಕ್ಷೇತ್ರದ ಬಿಆರ್‌ಎಸ್‌ ಅಭ್ಯರ್ಥಿ ಕೋಟಾ ಪ್ರಭಾಕರ ರೆಡ್ಡಿ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಅವರಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಸಿದ್ದಿಪೇಟ ಜಿಲ್ಲೆ ಸುರಂಪಲ್ಲಿ ಗ್ರಾಮದಲ್ಲಿ ಪ್ರಭಾಕರರೆಡ್ಡಿಯವರು ಮತಯಾಚನೆ ಮಾಡುತ್ತಿದ್ದರು. ನಂತರ  ಪ್ರಭಾಕರ ರೆಡ್ಡಿ ಅವರು ಕಾರನ್ನು ಹತ್ತುವಾಗ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಹಿಡಿದು ಥಳಿಸಲಾಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಚಾಕು ಇರಿತ ವ್ಯಕ್ತಿಯನ್ನು ಗಟಾನಿ ರಾಜು ಎನ್ನಲಾಗಿದ್ದು, ಆತ ಕಾಂಗ್ರೆಸ್ ಶಾಲು ಧರಿಸಿರೋ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Share Post