CrimeNational

ಜಮ್ಮು-ಕಾಶ್ಮೀರದಲ್ಲಿ ಹಿಮಪಾತ; ಹಿಮ ಸಮಾಧಿಯಾದ ಮೂವರು ಕಾರ್ಮಿಕರು

ಶ್ರೀನಗರ; ಇಲ್ಲಿನ ಗಂದರ್‌ಬಲ್ ಬಳಿಯ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಮತ್ತು ಝೋಜಿಲಾ ಬಳಿ ಹಿಮಪಾತವಾಗಿದೆ. ಹಿಮಪಾತಕ್ಕೆ ಸಿಲುಕಿ ಮೂವರು ಕಾರ್ಮಿಕರು ಹಿಮಸಮಾಧಿಯಾಗಿದ್ದಾರೆ. ಇದ್ರಲ್ಲಿ ಒಬ್ಬನ ಮೃತದೇಹ ಹೊರತೆಗೆಯಲಾಗಿದೆ. ಉಳಿದಿಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಹೈದರಾಬಾದ್‌ನ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯಿಂದ ಈ ಭಾಗದಲ್ಲಿ ಸುರಂಗ ಕೆಲಸ ನಡೆಯುತ್ತಿತ್ತು. ಈ ವೇಳೆ ಹಿಮಪಾತವಾಗಿದೆ. ಪೊಲೀಸ್, ಎಸ್‌ಡಿಆರ್‌ಎಫ್, ಸೇನೆ, ಬೀಕನ್‌ಗಳು ಮತ್ತು ಎಂಇಐಎಲ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Share Post