CrimePolitics

ಕ್ಷುದ್ರ ಪೂಜೆಗಾಗಿ ಬಾಲಕಿಯ ಬಲಿ..!; ಸಿಕ್ಕಿಬಿದ್ದ ಆರೋಪಿಗಳು!

ಆಂಧ್ರಪ್ರದೇಶ; ಕ್ಷುದ್ರ ಪೂಜೆ ಮಾಡುವುದಕ್ಕಾಗಿ ಶಾಲಾ ಬಾಲಕಿಯನ್ನು ಬಲಿ ಕೊಡಲಾಗಿದೆ. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿಡಿಯಾಲ ಬಳಿಯ ಮುಚ್ಚುನರಿ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಕ್ಷುದ್ರ ಪೂಜೆ ನಡೆಸಿರುವುದಕ್ಕೆ ಸಾಕ್ಷಿಯಾಗಿ ಗ್ರಾಮದ ಹೊರವಲಯದಲ್ಲಿ ಕುರುಹುಗಳು ಪತ್ತೆಯಾಗಿದ್ದು, ವ್ಯಕ್ತಿಯೊಬ್ಬ ಪೂಜೆಗಾಗಿ ಬಾಲಕಿಯ ಬಲಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ..

ಇದನ್ನೂ ಓದಿ; ಕಾಲೇಜು ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಮೂರು ದಿನಗಳ ಹಿಂದೆ ಉದ್ಯಾನವೊಂದರಲ್ಲಿ ಬಾಲಕಿ ಆಟವಾಡುತ್ತಿದ್ದಳು.. ಅಲ್ಲಿಂದ ಆಕೆ ನಾಪತ್ತೆಯಾಗಿದ್ದಳು.. ಹೀಗಾಗಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.. ಎರಡು ದಿನಗಳಿಂದ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ.. ಕೊನೆಗೆ ಆಕೆಯ ಮೃತದೇಹ ಸಿಕ್ಕಿದೆ.. ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ..

ಇದನ್ನೂ ಓದಿ; ಬೆಂಗಳೂರಿಗೆ ಬರಲಿವೆ ಬೆಂಕಿ ನಂದಿಸುವ ರೋಬೋಟ್‌ಗಳು..!

ಇನ್ನೊಂದೆಡೆ ಊರ ಹೊರವಲಯದಲ್ಲಿ ಕ್ಷುದ್ರಪೂಜೆಗಳನ್ನು ನಡೆಸಲಾಗಿದೆ. ಅದಕ್ಕಾಗಿ ಬಾಲಕಿಯ ಬಲಿ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ.. ಈ ಬಗ್ಗೆ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ಅದರಲ್ಲಿ ಒಬ್ಬ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; 30 ಲಕ್ಷ ರೂ. ಆಸೆಗೆ ಕಿಡ್ನಿ ದಾನ ಮಾಡಿದ ಆಟೋ ಚಾಲಕ!; ಪಂಗನಾಮ ಹಾಕಿದ ವಂಚಕರು!

Share Post