BengaluruCrime

ಸೊಂಟದಲ್ಲಿದ್ದ ಚಾಕು; ಅಪಘಾತದ ವೇಳೆ ಇಬ್ಬರು ಪ್ರಾಣಕ್ಕೆ ಮುಳುವಾಯಿತು!

ಬೆಂಗಳೂರು; ಬೆಂಗಳೂರಿನ ಹೆಬ್ಬಾಳದಲ್ಲಿ ಬೈಕ್‌ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸೋದರ ಸಂಬಂಧಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಆದ್ರೆ ಅಪಘಾತದಿಂದ ಅವರು ಸಾವನ್ನಪ್ಪಿಲ್ಲ.. ಬದಲಾಗಿ ಸೊಂಟದಲ್ಲಿ ಇಟ್ಟುಕೊಂಡಿದ್ದ ಚಾಕು ಚುಚ್ಚಿಕೊಂಡು ಸಾವನ್ನಪ್ಪಿದ್ದಾರೆ.. ರಕ್ಷಣೆಗಾಗಿ ಇಟ್ಟುಕೊಂಡಿದ್ದ ಚಾಕುವೇ ಅವರಿಗೆ ಮುಳುವಾಗಿದೆ..
ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಾಗರಾಜ್‌ ಹಾಗೂ ರಾಜೇಶ್‌ ಕುಮಾರ್‌ ಸಾವನ್ನಪ್ಪಿದವರು.. ಇವರು ನಿನ್ನೆ ಮಧ್ಯರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ.. ಇದರಲ್ಲಿ ರಾಜೇಶ್‌ ಜೀವ ರಕ್ಷಣೆಗೆಂದು ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ.. ಅದು ಚುಚ್ಚಿಕೊಂಡು ಇಬ್ಬರು ಸಾವಾಗಿದೆ..
ಅಂದಹಾಗೆ ರಾಜೇಶ್‌ ಯಾಕೆ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ ಎಂಬುದರ ಬಗ್ಗೆ ಹೆಬ್ಬಾಳ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಬೈಕ್‌ ಅತಿವೇಗದಲ್ಲಿ ಚಾಲನೆ ಮಾಡಲಾಗುತ್ತಿತ್ತು.. ಇನ್ನು ಅವರು ಮಧ್ಯರಾತ್ರಿ ಎಲ್ಲಿಗೆ ಹೋಗಿದ್ದರು.. ಆ ಸಮಯದಲ್ಲಿ ಚಾಕು ಯಾಕೆ ಇಟ್ಟುಕೊಂಡಿದ್ದರು.. ವೇಗವಾಗಿ ಬೈಕ್‌ ಓಡಿಸುತ್ತಿದ್ದುದು ಏಕೆ..? ಅವರು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ..

Share Post