BengaluruCrime

ರೇಣುಕಾಸ್ವಾಮಿ ಕೊಲೆ ಪ್ರಕರಣ; ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್‌ ಠಾಣೆಗೇ 144 ಸೆಕ್ಷನ್‌ ಜಾರಿ!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ 13 ಮಂದಿಯ ವಿಚಾರಣೆ ನಡೆಯುತ್ತಿದೆ.. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.. ಇದರ ನಡುವೆ ಇಂದು ಪೊಲೀಸ್‌ ಠಾಣೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.. ಜೊತೆಗೆ ಠಾಣೆಯ ಸುತ್ತಾ ಶಾಮಿಯಾನ ಬಟ್ಟೆಯ ಮೂಲಕ ಮುಚ್ಚಲಾಗಿದೆ.. ಜೊತೆಗೆ ಐದು ದಿನಗಳ ಕಾಲ ಪೊಲೀಸ್‌ ಠಾಣೆಯ 200 ಮೀಟರ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.. ಬೆಂಗಳೂರು ಇತಿಹಾಸದಲ್ಲೇ ಪೊಲೀಸ್‌ ಠಾಣೆಗೆ 144 ಸೆಕ್ಷನ್‌ ಜಾರಿ ಮಾಡಿರುವುದು ಇದೇ ಮೊದಲು..

ಇಂದಿನಿಂದ ಜೂನ್ 17ರ ತನಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್  ಜಾರಿ ಮಾಡಲಾಗಿದೆ.. ಹೀಗಾಗಿ, ಪೊಲೀಸ್‌ ಠಾಣೆ ಸುತ್ತಮುತ್ತ ಯಾರೂ ಗುಂಪು ಸೇರುವಂತಿಲ್ಲ. ಇನ್ನು ಇದೇ ವೇಳೆ ಪುಡಾರಿಯೊಬ್ಬ ಗದ್ದಲ ಮಾಡಿದ್ದು, ಆತನನ್ನು ಠಾಣೆಗೆ ಕರೆದುಕೊಂಡು ಹೋಗಲಾಗಿದೆ..

 

Share Post