BengaluruCrime

ಎಸ್‌.ಆರ್‌.ವಿಶ್ವನಾಥ್‌ ಕೊಲೆಗೆ ಸ್ಕೆಚ್‌ ಪ್ರಕರಣ; 7 ಗಂಟೆ ಕಾಲ ಗೋಪಾಲಕೃಷ್ಣ ವಿಚಾರಣೆ

ಬೆಂಗಳೂರು: ಶಾಸಕ ಎಸ್‌.ಆರ್‌.ವಿಶ್ವನಾಥ್‌ ಕೊಲೆಗೆ ಸ್ಕೆಚ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೋಪಾಲಕೃಷ್ಣರನ್ನು ರಾಜಾನುಕುಂಟೆ ಪೊಲೀಸರು ಇಂದು ವಿಚಾರಣೆಗೊಳಪಡಿಸಿದರು. ಸುಮಾರು ಏಳು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ಗೋಪಾಲಕೃಷ್ಣರನ್ನು ಡಿವೈಎಸ್‌ಪಿ ನಾಗರಾಜ್‌ ವಿಚಾರಣೆಗೊಳಪಡಿಸಿದರು. ಕುಳ್ಳ ದೇವರಾಜ್‌ ಯಾವಾಗಿಂದ ಪರಿಚಯ..?, ಸುಪಾರಿ ಕಿಲ್ಲರ್ಸ್‌ ಸಂಪರ್ಕಿಸಿದ್ದರಾ..?, ಯಾವತ್ತು ಈ ಮಾತುಕತೆ ನಡೆದಿದ್ದು..?, ವಿಡಿಯೋದಲ್ಲಿ ಮಾತನಾಡಿರುವುದು ನೀವೇನಾ..? ಹೀಗೆ ಗೋಪಾಲಕೃಷ್ಣಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ಮತ್ತೊಬ್ಬ ಆರೋಪಿ ದೇವರಾಜ್‌ಗೆ ಕೇಳಿದ್ದ ಪ್ರಶ್ನೆಗಳನ್ನೇ ಗೋಪಾಲಕೃಷ್ಣಗೆ ಕೇಳಿದ್ದಾರೆ.

 

Share Post