Bengaluru

ಬಿಜೆಪಿ ವಿರುದ್ಧ ಕೆಸಿಆರ್‌ ಸಮರ; ತೆಲಂಗಾಣ ಸಿಎಂಗೆ ಷಹಬ್ಬಾಸ್‌ ಎಂದ ದೇವೇಗೌಡರು

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಕೋಮುವಾದಿ ನೀತಿಗಳ ವಿರುದ್ಧ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಸಿಡಿದೆದ್ದಿದ್ದಾರೆ. ಈಗ ಅವರಿಗೆ ದೇಶದ ವಿವಿಧ ನಾಯಕ ಅಭಯ ಸಿಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಚಂದ್ರಶೇಖರ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಕೆಸಿಆರ್‌ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ. ಜೊತೆಗೆ ಅವರಿಗೆ ಅಭಿನಂದಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

   ದೇವೇಗೌಡರೇ ಖುದ್ದಾಗಿ ಇಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನೀವು ತುಂಬಾ ಧೈರ್ಯದಿಂದ ಹೋರಾಟ ಮಾಡುತ್ತಿದ್ದೀರಿ. ಕೋಮುವಾದಿ ಶಕ್ತಿಗಳ ವಿರುದ್ಧ ಎಲ್ಲರೂ ಹೋರಾಡಲೇಬೇಕು. ನಮ್ಮ ದೇಶದ ಜಾತ್ಯತೀತ ಸಂಸ್ಕೃತಿಯನ್ನು ರಕ್ಷಿಸಬೇಕು. ಇದಕ್ಕಾಗಿ ನಿಮ್ಮ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದು ದೇವೇಗೌಡರು ಅಭಯ ನೀಡಿದಾರೆ.

Share Post