CinemaCrime

ದರ್ಶನ್‌ ಪ್ರಕರಣದಲ್ಲಿ ಸಿನಿಮಾ ರಿಲೀಸ್‌ ಆದ ಮೇಲೆ ಚಿತ್ರಕಥೆ ರೆಡಿಯಾಗ್ತಿದೆ; ರಾಮ್‌ಗೋಪಾಲ್‌ ವರ್ಮಾ

ಹೈದರಾಬಾದ್‌; ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.. ವಿಚಾರಣೆ ನಡೆಯುತ್ತಿದೆ.. ಈ ನಡುವೆ ತನಿಖೆ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ.. ಹೀಗಿರಬೇಕಾದರೆ, ಖ್ಯಾತ ಚಿತ್ರ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕೂಡಾ ಇಂತಹದ್ದೇ ಒಂದು ಅನುಮಾನ ವ್ಯಕ್ತಪಡಿಸಿದ್ದಾರೆ..

ಪ್ರಕರಣದ ಬಗ್ಗೆ ರಾಮ್‌ ಗೋಪಾಲ್‌ ವರ್ಮಾ ಅವರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ..

‘ ಸಿನಿಮಾ ಶೂಟಿಂಗ್‌ ಶುರುವಾಗುವ ಮೊಲದೇ  ನಿರ್ದೇಶಕರು ಚಿತ್ರಕಥೆ ಬರೆದಿರುತ್ತಾರೆ.. ಕೆಲವು ನಿರ್ದೇಶಕರು ಸೆಟ್​ನಲ್ಲೂ ಚಿತ್ರಕಥೆ ಬರೆಯುವ ಸಂದರ್ಭಗಳೂ ಇರುತ್ತವೆ. ಆದ್ರೆ, ದರ್ಶನ್ ವಿರುದ್ಧ ದಾಖಲಾಗಿರುವ ಕೊಲೆ ಪ್ರಕರಣದಲ್ಲಿ ಸಿನಿಮಾ ಬಿಡುಗಡೆಯೂ ಆಗಿದೆ.. ಇದಾದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ’ ಹೀಗಂತ ರಾಮ್‌ ಗೋಪಾಲ್‌ ವರ್ಮಾ ಬರೆದುಕೊಂಡಿದ್ದಾರೆ..

ಅಂದರೆ ಪ್ರಕರಣದಲ್ಲಿ ಕೊಲೆ ಮಾಡಿದ ನಂತರ ಹೊಸ ಕತೆ ಹೆಣೆಯಲಾಗುತ್ತಿದೆ ಎಂದು ರಾಮ್‌ ಗೋಪಾಲ್‌ ವರ್ಮಾ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..

Share Post