CrimeDistricts

ತಾಯಿಗೆ ತಂದೆಯಿಂದ ನಿತ್ಯ ಕಿರುಕುಳ; ಸ್ವಂತ ತಂದೆಯನ್ನೇ ಕೊಲೆ ಮಾಡಿದ ಮಗ

ರಾಯಚೂರು; ಕುಡಿದು ಬಂದು ದಿನಾ ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗನೇ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ದೇವರಭೂಪೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶೀಲವಂತ ಎಂಬಾತನೇ ಸ್ವಂತ ತಂದೆಯನ್ನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಶೀಲವಂತನ ತಂದೆ ಐವತ್ತೈದು ವರ್ಷದ ತಿಮ್ಮಣ್ಣನೇ ಕೊಲೆಯಾದ ವ್ಯಕ್ತಿ, ತಿಮ್ಮಣ್ಣ ದಿನವೂ ಮದ್ಯ ಸೇವನೆ ಮಾಡುತ್ತಿದ್ದ. ಜೊತೆ ಗಾಂಜಾ ದಾಸನಾಗಿದ್ದ. ಕಂಠಪೂರ್ತಿ ಕುಡಿದು ಮತ್ತೇರಿಸಿಕೊಂಡು ಬರುತ್ತಿದ್ದ ಆತ ನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇತ್ತ ಶೀಲವಂತ ತಾಯಿ ನೋವು ಹಾಗೂ ತಂದೆಯ ದುರ್ಬುದ್ಧಿ ನೋಡಿ ರೋಸಿಹೋಗಿದ್ದ.

ಹೀಗಾಗಿ ಶೀಲವಂತ ತನ್ನ ಸ್ವಂತ ತಂದೆಯ ಮೇಲೇ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಅನಂತರ ಆತನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಲಿಂಗಸುಗೂರು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Share Post