Districts

ನಾಯಿ ಕಚ್ಚಿ ಮೂವರು ಮಕ್ಕಳಿಗೆ ಗಾಯ

ಚಿಕ್ಕೋಡಿ: ಮೂವರು ಮಕ್ಕಳು ಸೇರಿದಂತೆ ಇಬ್ಬರು ವ್ಯಕ್ತಿಗೆ ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟ್ಟಪ್ರಭಾ ಪಟ್ಟಣದಲ್ಲಿ ನಡೆದಿದೆ. ಮಕ್ಕಳ ತಲೆ ಹಾಗೂ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಗ್ರಾಮಸ್ಥರು ನಾಯಿ ಓಡಿಸಿದರೂ ಕೂಡ ಮತ್ತೆ ಬಂದು ಮಕ್ಕಳಿಗೆ ಕಚ್ಚಿದೆ. ಹೀಗಾಗಿ ಸಿಟ್ಟಿಗೆದ್ದ ಸ್ಥಳೀಯರು ಶ್ವಾನವನ್ನು ದೊಣ್ಣೆಗಳಿಂದ ಹೊಡೆದು ಕೊಂದು ಹಾಕಿದ್ದಾರೆ. ಸದ್ಯ ಗಾಯಗೊಂಡ ಮಕ್ಕಳು ಮತ್ತು ಇಬ್ಬರು ವ್ಯಕಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ. ಈ ಘಟನೆ ಸಂಬಂಧಿಸಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post