CrimeNational

ಹಾಲಿನ ಟ್ಯಾಂಕರ್‌-ಡಬಲ್‌ ಡೆಕ್ಕರ್‌ ಬಸ್‌ ಡಿಕ್ಕಿ; ಭೀಕರ ಅಪಘಾತದಲ್ಲಿ 18 ಮಂದಿ ದುರ್ಮರಣ!

ಉನ್ನಾವೊ; ಉತ್ತರ ಪ್ರದೇಶದ ಉನ್ನಾವೊ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.. ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.. ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ ವೇನಲ್ಲಿ ಈ ಭೀಕರ ದುರಂತ ಇಂದು ಮುಂಜಾನೆ ನಡೆದಿದೆ.. ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಏನಿದು ʻರಾಮನಗರʼ ಗುದ್ದಾಟ..?; ಹೆಸರು ಬದಲಿಸಿದರೆ ಅಭಿವೃದ್ಧಿ ಆಗುತ್ತಾ..?

ಬಿಹಾರದ ಸೀತಾರ್ಮಹಿಯಿಂದ ದೆಹಲಿಗೆ ಹೊರಟಿದ್ದ ಡಬಲ್‌ ಡೆಕ್ಕರ್‌ ಬಸ್‌ ಹಾಗೂ ಹಾಲಿನ ಟ್ಯಾಂಕರ್‌ ನಡುವೆ ಡಿಕ್ಕಿಯಾಗಿದ್ದರಿಂದ ಈ ದುರಂತ ನಡೆದಿದೆ.. ಗರ್ಹಾ ಎಂಬ ಹಳ್ಳಿಯ ಬಳಿ ಹಾಲಿನ ಟ್ಯಾಂಕರ್‌ಗೆ ವೇಗವಾಗಿ ಬರುತ್ತಿದ್ದ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಟ್ಯಾಂಕರ್‌ ಪಲ್ಟಿಯಾಗಿದೆ..

ಇದನ್ನೂ ಓದಿ; ಸತೀಶ್‌ ಜಾರಕಿಹೊಳಿ-ಹೆಚ್ಡಿಕೆ ರಹಸ್ಯ ಭೇಟಿ; ದೆಹಲಿಯಲ್ಲಿ ಆ 1 ಗಂಟೆ ಮೀಟಿಂಗ್‌ ರಹಸ್ಯವೇನು..?

ಬಸ್‌ ಬಹುತೇಕ ನಜ್ಜುಗುಜ್ಜಾಗಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ರಸ್ತೆಗೆ ಹಾರಿಬಂದು ಬಿದ್ದಿದ್ದಾರೆ.. ಇನ್ನೂ ಕೆಲವರು ಬಸ್‌ನಲ್ಲೇ ನಜ್ಜುಗುಜ್ಜಾಗಿದ್ದಾರೆ..

ಇದನ್ನೂ ಓದಿ; ಕಾಲೇಜು ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..!

 

Share Post