CrimeNational

ಸಾಲದ‌ ಕಂತು ಕಟ್ಟದ ಗಂಡ; ಪತ್ನಿಯನ್ನು ಕರೆದೊಯ್ದ ಬ್ಯಾಂಕ್ ಸಿಬ್ಬಂದಿ

ಚೆನ್ನೈ; ಗಂಡ ಸಾಲದ ಕಂತು ಕಟ್ಟಲಿಲ್ಲ ಅಂತ ಹೆಂಡತಿಯನ್ನು ಬ್ಯಾಂಕ್ ಸಿಬ್ಬಂದಿ ಕರೆದುಕೊಂಡು ಹೋಗಿದ್ದ ಘಟನೆ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ವಜಪ್ಪಾಡಿಯಲ್ಲಿ ಈ ಘಟನೆ ನಡೆದಿದೆ..

  ಇಲ್ಲಿನ ತುಕ್ಕಿಯಂಪಾಲಯಂನ ಪ್ರಶಾಂತ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ.. ನಾಲ್ಕು ತಿಂಗಳ ಹಿಂದೆ ಈತ ಐಡಿಎಫ್ ಸಿ ಫಸ್ಟ್ ಬ್ಯಾಂಕಿನಿಂದ 35 ಸಾವಿರ ರೂಪಾಯಿ ಸಾಲ ಮಾಡಿದ್ದ.. ವಾರದ ಲೆಕ್ಕದಲ್ಲಿ ಸಾಲದ ಕಂತು ಕಟ್ಟಬೇಕಿತ್ತು.. ಆದ್ರೆ ಈ ವಾರದ ಕಂತು 770 ರೂಪಾಯಿ ಕಟ್ಟಕ್ಕೆ ಆಗಿರಲಿಲ್ಲ.. ಹೀಗಾಗಿ, ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಪ್ರಶಾಂತ್ ಹೆಂಡತಿಯನ್ನು ಕರೆದುಕೊಂಡು ಹೋಗಿ ಬ್ಯಾಂಕ್ ನಲ್ಲಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

  ನಂತರ ಕಾರ್ಮಿಕ ಪ್ರಶಾಂತ್ ಬ್ಯಾಂಕ್ ಗೆ ಹೋಗಿ ಕಂತಿನ‌ಹಣ ಕಟ್ಟಿ ಪತ್ನಿಯನ್ನು ಬಿಡಿಸಿಕೊಂಡು ಬಂದಿದ್ದಾನೆ ಎಂದು ತಿಳಿದುಬಂದಿದೆ.

 

Share Post