CrimeDistricts

ಕೊಪ್ಪಳದಲ್ಲಿ ಹಿಟ್‌ ಅಂಡ್‌ ರನ್‌ ಕೇಸ್‌; ಎಎಸ್‌ಐ ಬಲಿ ಪಡೆದ ಅಪರಿಚಿತ ವಾಹನ!

ಕೊಪ್ಪಳ; ಅಪರಿಚಿತ ವಾಹನವೊಂದು ಪೊಲೀಸ್‌ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.. ಇದರಿಂದಾಗಿ ಎಎಸ್‌ಐ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ನಗರ ಬಳಿ ನಡೆದಿದೆ.. ವನಬಳ್ಳಾರಿ ಸಮೀಪ ಹೈವೇ ಪ್ಯಾಟ್ರೋಲಿಂಗ್‌ ಬಂದೋಬಸ್ತ್‌ ಮಾಡುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ..

ಇದನ್ನೂ ಓದಿ; ರೈಲ್ವೆ ಟ್ರ್ಯಾಕ್‌ ಮೇಲೆ ಎಣ್ಣೆ ಪಾರ್ಟಿ!; ರೈಲಿಗೆ ಸಿಲುಕಿ ಮೂವರು ಯುವಕರ ಸಾವು!

ಎಎಸ್‌ಐ ರಾಮಣ್ಣ ಎಂಬುವವರು ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.. ಇವರು ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಸಿಬ್ಬಂದಿಯ ಜೊತೆ ಗಸ್ತಿನಲ್ಲಿದ್ದರು.. ಈ ವೇಳೆ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.. ತಲೆಯ ಮೇಲೆ ವಾಹನ ಹತ್ತಿದ್ದರಿಂದ ರಾಮಣ್ಣ ಅವರ ತಲೆ ನಜ್ಜುಗುಜ್ಜಾಗಿದೆ..

ಇದನ್ನೂ ಓದಿ; ಅಕ್ಕನ ಗಂಡನೇ ಬೇಕೆಂದು ಪಟ್ಟು ಹಿಡಿದ ಯುವತಿ!; ಒಪ್ಪದಿದ್ದಾಗ ವಿಷ ಸೇವಿಸಿ ಆತ್ಮಹತ್ಯೆ!

ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹಿರಿಯ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಅಪರಿಚಿತ ವಾಹನವನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಲಾಗುತ್ತಿದೆ..

Share Post