CrimeDistricts

ರೈಲ್ವೆ ಟ್ರ್ಯಾಕ್‌ ಮೇಲೆ ಎಣ್ಣೆ ಪಾರ್ಟಿ!; ರೈಲಿಗೆ ಸಿಲುಕಿ ಮೂವರು ಯುವಕರ ಸಾವು!

ಕೊಪ್ಪಳ; ಗ್ರಾಮದ ಪಕ್ಕ ರೈಲ್ವೆ ಟ್ರ್ಯಾಕ್‌ ಹಾದುಹೋಗಿದ್ದರೆ, ಊರಿನಲ್ಲಿ ಕೆಲಸವಿಲ್ಲದೆ ತಿರುಗಾಡುವವರು, ಟ್ರ್ಯಾಕ್‌ ಪಕ್ಕ ಇಸ್ಪೀಟ್‌ ಆಡುವುದು, ಎಣ್ಣೆ ಪಾರ್ಟಿ ಮಾಡುವುದು ಮಾಡುತ್ತಾರೆ.. ಒಂದು ರೀತಿ ರೈಲ್ವೆ ಟ್ರ್ಯಾಕ್‌ ಟೈಮ್‌ ಪಾಸ್‌ ರೀತಿ ಬಳಸಿಕೊಳ್ಳುತ್ತಾರೆ.. ಅದ್ರಲ್ಲೂ ನಾಲ್ಕು ಜನ ಫ್ರೆಂಡ್ಸ್‌ ಸೇರಿದರು ಅಂದ್ರೆ, ರೈಲ್ವೆ ಟ್ರ್ಯಾಕ್‌ಗೆ ಮದ್ಯ, ಸ್ಕ್ಯಾಕ್ಸ್‌ ತಂದು ಅಲ್ಲೇ ಪಾರ್ಟಿ ಮಾಡಿಬಿಡುತ್ತಾರೆ.. ಹಾಗೆ ಪಾರ್ಟಿ ಮಾಡುವಾಗ ರೈಲು ಬರುವುದನ್ನು ನೋಡದೇ ಯಾಮಾರಿದ ಪರಿಣಾಮ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ..

ಇದನ್ನೂ ಓದಿ; ಅಕ್ಕನ ಗಂಡನೇ ಬೇಕೆಂದು ಪಟ್ಟು ಹಿಡಿದ ಯುವತಿ!; ಒಪ್ಪದಿದ್ದಾಗ ವಿಷ ಸೇವಿಸಿ ಆತ್ಮಹತ್ಯೆ!

ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಈ ಘಟನೆ ನಡೆದಿದೆ.. ಮೂವರು ಯುವಕರು ರೈಲ್ವೆ ಟ್ರ್ಯಾಕ್‌ ಮೇಲೆ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು.. ಈ ವೇಳೆ ಹುಬ್ಬಳ್ಳಿಯಿಂದ ಸಿಂಧನೂರು ಕಡೆ ತೆರಳುತ್ತಿದ್ದ ರೈಲು ಈ ಮೂವರ ಮೇಲೆ ಹರಿದಿದೆ.. ಹೀಗಾಗಿ ಮೂವರೂ ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಮೌನೇಶ್‌ ಪತ್ತಾರ್‌, ಸುನಿಲ್‌ ಹಾಗೂ ವೆಂಕಟ ಭೀಮನಾಯ್ಕ ಎಂಬ ಯುವಕರೇ ಸಾವನ್ನಪ್ಪಿದವರು.. ಇವರು ಆಗಾಗ ರೈಲ್ವೆಟ್ರ್ಯಾಕ್‌ ಮೇಲೆ ಕುಳಿತು ಪಾರ್ಟಿ ಮಾಡುತ್ತಿದ್ದರು.. ಇದೇ ರೀತಿ ಪಾರ್ಟಿ ಮಾಡುವ ವೇಳೆ ಯಮನ ಆಗಮನವಾಗಿದೆ.. ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ.. ಈ ಬಗ್ಗೆ ಗದಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post