BengaluruCrime

ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದು ಎಂಬಿಬಿಎಸ್‌ ವಿದ್ಯಾರ್ಥಿಗೆ ದಾರುಣ ಸಾವು!

ಬೆಂಗಳೂರು; ನೀರಿನ ಟ್ಯಾಂಕರ್‌ ಗುದ್ದಿ ಎಂಬಿಬಿಎಸ್‌ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾನೆ.. ಬೆಂಗಳೂರಿನ ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಶಾನ್‌ ಎಂಬ ಎಂಬಿಬಿಎಸ್‌ ವಿದ್ಯಾರ್ಥಿ ಟ್ಯಾಂಕರ್‌ಗೆ ಬಲಿಯಾಗಿದ್ದಾನೆ..

ಇದನ್ನೂ ಓದಿ; ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತೆ..!; ಯೌವನವಾಗಿರಲು ಬೆಲ್ಲವೇ ಮದ್ದು!

ಇಶಾನ್‌ ಥಣಿಸಂದ್ರದಲ್ಲಿ ಸ್ನೇಹಿತನ ಭೇಟಿಗೆ ಬಂದಿದ್ದು, ಗುರುವಾರ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ.. ಈ ವೇಳೆ ನೀರಿನ ಟ್ಯಾಂಕರ್‌ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.. ಈ ವೇಳೆ ಇಶಾನ್‌ ಕೆಳಗೆ ಬಿದ್ದಿದ್ದು, ಆತನ ಮೇಲೆ ಟ್ಯಾಂಕರ್‌ ಚಕ್ರಗಳು ಹತ್ತಿವೆ.. ಇದರಿಂದಾಗಿ ಇಶಾನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಅಪಘಾತದ ನಂತರ ಚಾಲಕ ಟ್ಯಾಂಕರ್‌ನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ.. ಆದ್ರೆ ಸ್ಥಳೀಯರು ಆತನನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಮಾನ್ಯತಾ ಟೆಕ್‌ಪಾರ್ಕ್‌ ವೃತ್ತದಲ್ಲಿ ಇಶಾನ್‌ ಮನೆ ಇದ್ದು, ವಿಷಯ ಗೊತ್ತಾಗುತ್ತಿದ್ದಂತೆ ಇಶಾನ್‌ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.. ಸದ್ಯ ಇಶಾನ್‌ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

Share Post