CrimeDistricts

ಧಾರವಾಡ ಬಳಿ ರಣಭೀಕರ ಅಪಘಾತ; ಆಂಧ್ರದ ಮೂವರ ದುರ್ಮರಣ!

ಧಾರವಾಡ; ಧಾರವಾಡದ ಬಳಿ ರಣಭೀಕರ ಅಪಘಾತ ನಡೆದಿದೆ.. ಅತಿವೇಗವಾಗಿ ಬರುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದ್ದು, ಈ ದುರಂತಕ್ಕೆ ಕಾರಣವಾಗಿದೆ.. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; ಹಿರಿಯ ನಟ ದ್ವಾರಕೀಶ್‌ ನಿಧನ; ಗಣ್ಯರ ಕಂಬನಿ

ಮೂವರ ದುರ್ಮರಣ, ಒಬ್ಬರಿಗೆ ಗಾಯ;

ಕಾರು ಅತಿವೇಗವಾಗಿ ಚಲಿಸುತ್ತಿತ್ತು.. ಈ ಕಾರಣದಿಂದಲೇ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಇನ್ನೊಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ನಾನು ಫುಲ್‌ ಟೈಮ್‌ ಪೊಲಿಟಿಷಿಯನ್‌ ಅಲ್ಲ; NewsX ಜತೆ ಅಣ್ಣಾಮಲೈ ಮಾತು

ಕಾರಿನಲ್ಲಿದ್ದವರು ಆಂಧ್ರಪ್ರದೇಶದ ಮೂಲದವರು!;

ಕಾರಿನಲ್ಲಿದ್ದವರು ಆಂಧ್ರಪ್ರದೇಶದವರು ಎಂದು ತಿಳಿದುಬಂದಿದೆ.. ಮೃತರ ಜೇಬಿನಲ್ಲಿ ಆಧಾರ್‌ ಕಾರ್ಡ್‌ ಸೇರಿ ಹಲವು ದಾಖಲೆಗಳು ಸಿಕ್ಕಿವೆ.. ಅದರ ಪ್ರಕಾರ ಅವರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವರು ಎಂದು ತಿಳಿದುಬಂದಿದೆ.. ಅವರು ಗೌಡ್‌ ಸಂಘದ ಸದಸ್ಯರಾಗಿದ್ದು, ಯಾವುದೋ ಕೆಲಸದ ಮೇಲೆ ಧಾರವಾಡಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.. ಈ ವೇಳೆ ಅವರ ಕಾರು ಬಸ್‌ ಡಿಕ್ಕಿ ಹೊಡೆದು ಈ ದುರಂತಕ್ಕೆ ಕಾರಣವಾಗಿದೆ..

ಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತನಿಖೆಯಿಂದ ಇನ್ನಷ್ಟು ಮಾಹಿತಿ ಪೊಲೀಸರಿಗೆ ತಿಳಿಯಲಿದೆ.

ಇದನ್ನೂ ಓದಿ; ಅತ್ತೆಯನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ ಸೊಸೆಯರು; ಚಪ್ಪಾಳೆ ಹೊಡೆದ ಮಗ!

 

Share Post