Crime

ವಾಮಾಚಾರ ಆರೋಪ ಹೊರಿಸಿ ವೃದ್ಧ ದಂಪತಿಯನ್ನು ಸುಟ್ಟ ಕಿರಾತಕ

ಮಧ್ಯಪ್ರದೇಶ: ವಾಮಾಚಾರ ಮಾಡಿದ ಆರೋಪದಡಿ ವೃದ್ಧ ದಂಪತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶದ ಜಬಲ್‌ ಪುರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಸಂಬಂಧ ದಯಾರಾಮ್‌ ಕುಲಸ್ತೆ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಸತ್ಯ ಬಾಯ್ಬಿಡಿಸಿದ್ದಾರೆ.

ತನ್ನ ಸಹೋದರನಿಗೆ ವಾಮಾಚಾರ ಮಾಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ದಂಪತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆಸ್ತಿ ವಿಚಾರವಾಗಿ ತಮ್ಮ ತಂದೆ ಹಾಗೂ ಇವರಿಗೂ ಮನಸ್ತಾಪ ಇದ್ದು ಅದರ ಸೇಡಿಗೆ ಇವರು ನನ್ನ ತಮ್ಮನ ಸಾವಿಗೆ ಕಾರಣರಗಿದ್ದಾರೆ. ಹಾಗಾಗಿ ಅವರನ್ನು ಕೊಲೆ ಮಾಡಲು ನಿರ್ಧರಿಸಿ ಜನವರಿ 9ರಮಧ್ಯರಾತ್ರಿ ಸುಮೇರ್ ಸಿಂಗ್ ಕುಲಸ್ತೆ (60) ಮತ್ತು ಅವರ ಪತ್ನಿ ಸಿಯಾಬಾಯಿ (55) ಅವರನ್ನು ಹರಿತವಾದ ವಸ್ತುವಿನಿಂದ ಕೊಲೆ ಮಾಡಿ ಅವರಿದ್ದ ಗುಡಿಸಲಿಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ.

ಘಟನೆ ನಡೆದ ಬಳಿಕ ದಯಾರಾಮ್‌ ಕುಲಸ್ತೆ ನಾಪತ್ತೆ ಆದ್ದರಿಂದ ಅನುಮಾನಗೊಂಡು ಪೊಲೀಸರು ಬಂಧಿಸಿ ಬಾಯ್ಬಿಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇನ್ನಷ್ಟು ತನಿಖೆಗೆ ಕ್ರಮ ಕೈಗೊಂಡಿದ್ದಾರೆ.

 

Share Post