CrimeDistricts

ಮಾಂಸದೂಟಕ್ಕಾಗಿ ನಡೆದೇ ಹೋಯ್ತು ಕೊಲೆ: ಆರೋಪಿಗಳು ಪರಾರಿ

ಹಾಸನ: ಆಸ್ತಿ, ಹಣ, ಒಡವೆ, ಹೆಣ್ಣಿಗಾಗಿ ಕೊಲೆ ನಡೆಯುವುದು ಹೊಸ ವಿಚಾರವೇನಲ್ಲ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿದೆ. ಆದರೆ ಈ ಕೊಲೆ ನಡೆದ ವಿಚಾರ ತಿಳಿದ್ರೆ ನಿಮಗೆ ಗಾಬರಿ ಆಗೋದಂತು ಸತ್ಯ. ಕೇವಲ ಒಂದು ಬಾಡೂಟಕ್ಕೆ ಕರೆಯಲಿಲ್ಲ ಅಂತ ಕೊಲೆ ಮಾಡಿದ್ದಾರೆ. ಆಶ್ಚರ್ಯ ಅನಿಸಿದ್ರೂ ಇದು ಸತ್ಯ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪುರಲೆಹಳ್ಳಿಯಲ್ಲಿ ಶರತ್‌ ಮತ್ತವರ ಕುಟುಂಬಸ್ಥರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಯೇ ಬಾಡೂಟಕ್ಕೆ ವ್ಯವಸ್ಥೆ ಮಾಡಿದ್ರು..

ಏರ್ಪಡಿಸಿದ ಬಾಡೂಟಕ್ಕೆ ತಮ್ಮನ್ನು ಕರೆಯಲಿಲ್ಲ ಎಂದು ಧನಪಾಲ್, ಅರ್ಜುನ್, ನಟರಾಜ್, ಮಂಜುನಾಥ ಇತರರು ಖ್ಯಾತೆ ತೆಗೆದಿದ್ದಾರೆ. ಪರಸ್ಪರ ವಾಗ್ವಾದದಲ್ಲಿ ಮುಳುಗಿದ್ದ ಗಲಾಟೆ ತಾರಕಕ್ಕೇರಿ ಶರತ್, ರಾಕೇಶ್‌, ಯೋಗೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಎಸ್ಕೇಪ್‌ ಆಗಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ರು. ಗಂಭೀರ ಗಾಯಗೊಂಡಿದ್ದ ಶರತ್‌ನನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶರತ್‌ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share Post