CrimeDistricts

ನಾಲೆಯಲ್ಲಿ ಕೊಚ್ಚಿಹೋದ 22ರ ಯುವಕ

ಬಳ್ಳಾರಿ; ಹೊಲದಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಬಾಯಾರಿಕೆಯಾಗಿ ನೀರು ಕುಡಿಯಲು ನಾಲೆಗೆ ಇಳಿದ ಯುವಕ, ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

   ಉಪ್ಪಾರಪೇಟೆಯ ಗೊಲ್ಲರ ಗೋವಿಂದಪ್ಪ ಎಂಬುವರ ಪುತ್ರ ಚಂದ್ರು (22) ಕಾಲುವೆಗೆ ಬಿದ್ದು ನೀರುಪಾಲಾದ ಯುವಕ. ಚಂದ್ರು ಜಮೀನಿನಲ್ಲಿ ಫಸಲಿಗೆ ಗೊಬ್ಬರ ಹಾಕುವ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬಾಯಾರಿಕೆಯಾಗಿ ಬಸವಪುರ ಬಳಿಯ ತುಂಗಭದ್ರಾ ಎಲ್​ಎಲ್​ಸಿ ಕಾಲುವೆಗೆ ಇಳಿದಿದ್ದಾನೆ.

ಈಜು ಬಾರದ ಈತ ಅಚಾನಕ್ಕಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಯುವಕನ ಪತ್ತೆಗಾಗಿ ಪೊಲೀಸರು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯುವಕನ ದೇಹ ಪತ್ತೆಯಾಗಿಲ್ಲ.

Share Post