CrimeDistricts

ಬಾಟಲ್‌ನಿಂದ ಚುಚ್ಚಿ‌ ಬಾರ್ ಕ್ಯಾಷಿಯರ್ ಬರ್ಬರ ಹತ್ಯೆ

ಕೊಡಗು; ಬಾರ್ ಕ್ಲೋಸ್ ಮಾಡುವಾಗ ಬಂದು ಮದ್ಯಕ್ಕಾಗಿ ಕ್ಯಾತೆ ತೆಗೆದು ಬಾರ್ ಕ್ಯಾಷಿಯರ್ ಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ.. ಬಿಯರ್ ಬಾಟಲ್ ಒಡೆದು ಕ್ಯಾಶಿಯರ್ ಗೆ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ..

 ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಬಾರ್ ನಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.. 40 ವರ್ಷದ ಸಂತೋಷ್ ಕೊಲೆಯಾದ ಕ್ಯಾಶಿಯರ್ ಎಂದು ಗುರುತಿಸಲಾಗಿದೆಮ ಇವರು‌ ಸೋಮವಾರಪೇಟೆ ಬಳಿಯ ಬೆಟ್ಟದಳ್ಳಿ ನಿವಾಸಿಯಾಗಿದ್ದಾರೆ.. ಕುಶಾಲನಗರದ ನಿವಾಸಿ ಹರ್ಷಕುಮಾರ್ ಎಂಬಾತನೇ ಕೊಲೆ ಮಾಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ..

 ಆರೋಪಿ ಹರ್ಷಕುಮಾರ್ ನನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.. ಆರೋಪಿ ರಾತ್ರಿ 12 ಗಂಟೆಗೆ ಬಂದು ಮದ್ಯ ಕೇಳಿದ್ದಾನೆ.. ಆದ್ರೆ 12 ಗಂಟೆಗೆ ಕ್ಲೋಸ್ ಮಾಡಬೇಕಿರುವುದರಿಂದ ಮದ್ಯ ಕೊಟ್ಟಿಲ್ಲ. ಇದರಿಂದ ಜಗಳ ತೆಗೆದು ಕೊಲೆ ಮಾಡಲಾಗಿದೆ.

ಕುಶಾಲನಗರದ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share Post