CrimeDistricts

ನರ್ಸ್‌ ಜೊತೆ ಕೂಡಾ ಅನುಚಿತ ವರ್ತನೆ ತೋರಿದ ಅಂಜಲಿ ಕೊಲೆ ಆರೋಪಿ!

ಹುಬ್ಬಳ್ಳಿ; ಅಂಜಲಿ ಎಂಬ ಯುವತಿಯನ್ನು ಅವರ ಮನೆಯಲ್ಲೇ ಕೊಲೆ ಮಾಡಿ, ಪರಾರಿಯಾಗುವಾಗ ರೈಲಿನಲ್ಲೂ ಮಹಿಳೆಯರ ಜೊತೆ ಅನುಚಿತ ವರ್ತನೆ ತೋರಿದ್ದ ಆರೋಪಿ ತನ್ನ ಬುದ್ಧಿ ಮುಂದುವರೆಸಿದ್ದಾನೆ.. ರೈಲಿನಿಂದ ಬಿದ್ದ ಗಾಯಗೊಂಡಿದ್ದ ಆರೋಪಿ ವಿಶ್ವ ಅಲಿಯಾಸ್‌ ಗಿರೀಶ್‌ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. ಈ ವೇಳೆ ಆಸ್ಪತ್ರೆ ನರ್ಸ್‌ ಜೊತೆಯೂ ಅನುಚಿತ ವರ್ತನೆ ತೋರಿದ್ದಾನೆ. ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿರುವುದಲ್ಲದೆ ಧಮ್ಕಿ ಕೂಡಾ ಹಾಕುತ್ತಿದ್ದಾನೆ ಎಂದು ತಿಳಿದುಬಂದಿದೆ..

ವಿಶ್ವನ ವರ್ತನೆ ಮಿತಿಮೀರಿದ್ದರಿಂದಾಗಿ ಆತ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಗೆ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.. ಏಳು ಜನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಆತನ ವರ್ತನೆ ಕಂಟ್ರೋಲ್‌ ಮಾಡಿಸುವ ಪ್ರಯತ್ನ ನಡೆದಿದೆ..

ಆರೋಪಿ ವಿಶ್ವ ಪೊಲೀಸ್‌ ವಶದಲ್ಲಿದ್ದು, ರೈಲಿನಿಂದ ಕೆಳಗೆ ಹಾರಿದಾಗ ತೀವ್ರವಾಗಿ ಗಾಯಗೊಂಡಿದ್ದ.. ಈ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಈ ವೇಳೆಯೂ ಆತ ಅನುಚಿತವಾಗಿಯೇ ವರ್ತಿಸುತ್ತಿದ್ದಾನೆ..

 

Share Post