CrimeDistricts

ಬಾಳೆಹಣ್ಣು ತುಳಿದು ಜಾರಿಬಿದ್ದ ವ್ಯಕ್ತಿ; ರಥ ಹರಿದು ದಾರುಣ ಸಾವು

ವಿಜಯನಗರ; ಸಾವು ಯಾವ ಯಾವ ರೂಪದಲ್ಲಿ ಬರುತ್ತದೋ‌ ಗೊತ್ತಾಗುವುದಿಲ್ಲ.. ಇಲ್ಲೊಬ್ಬ ರಥೋತ್ಸವಕ್ಕೆ ಹೋಗಿದ್ದ.. ಕೆಳಗೆ ಬಿದ್ದಿದ್ದ ಬಾಳೆಹಣ್ಣು ತುಳಿದು ಕಾಲು ಜಾರಿ ಬಿದ್ದಿದ್ದು ಅದೇ ವೇಳೆ ರಥ ಆತನ‌ ಮೇಲೆ ಹರಿದಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ..

  ಹೊಸಪೇಟೆಯಲ್ಲಿ ಶ್ರೀ ಜಂಬುನಾಥ ರಥೋತ್ಸ ಏರ್ಪಡಿಸಲಾಗಿತ್ತು.. ಈ ವೇಳೆ ಈ ದುರ್ಘಟನೆ ನಡೆದಿದೆ.. 49 ವರ್ಷದ ರಾಮಪ್ಪ‌ಎಂಬುವವರೇ ಸಾವನ್ನಪ್ಪಿದವರು..

   ನೂರಾರು ಜನ ಸಂಭ್ರಮದಿಂದ ರಥ ಎಳೆಯತ್ತಿದ್ದರು..‌ಈ ವೇಳೆ ರಾಮಪ್ಪ ಕೂಡಾ ಥೇರು ಎಳೆಯುತ್ತಿದ್ದರು. ಇದೇ ಭಕ್ತರು ಎಸೆದ ಬಾಳೆಹಣ್ಣಿನ ಮೇಲೆ ಕಾಲಿಟ್ಟಿದ್ದರಿಂದ ಜಾರಿ ಬಿದ್ದು ಅನಾಹುತ ನಡೆದಿದೆ.

ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ರಥೋತ್ಸವ ಅರ್ಧಕ್ಕೇ ನಿಂತಿದೆ..

Share Post