CrimeDistrictsNational

ಸಂಸತ್‌ನಲ್ಲಿ ಕಲರ್‌ ಸ್ಮೋಕ್‌ ಸಿಡಿಸಿದ ಪ್ರಕರಣ; ಮನೋರಂಜನ್‌ ಸ್ನೇಹಿತ ವಶಕ್ಕೆ

ನವದೆಹಲಿ; ಸಂಸತ್‌ನಲ್ಲಿ ನಡೆದ ಭದ್ರತಾ ಲೋಪ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಾಗಲಕೋಟೆಯಲ್ಲಿ ಇನ್ನೊಬ್ಬ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ಬಂಧಿತ ಮೈಸೂರಿನ ಮನೋರಂಜನ್‌ನ ಸ್ನೇಹಿತ ಸಾಯಿಕೃಷ್ಣ ಜಗಲಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮನೋರಂಜನ್‌ ಸ್ನೇಹಿತನಾಗಿರುವ ಕಾರಣದಿಂದ ಸಾಯಿಕೃಷ್ಣ ಜಗಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹಾಗಂತ ಸಾಯಿಕೃಷ್ಣ ಜಗಲಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ವಿಚಾರಣೆಯ ನಂತರವೇ ನಿಜ ವಿಚಾರ ಬಯಲಾಗಲಿದೆ. ಪೊಲೀಸರು ಕರೆದುಕೊಂಡು ಹೋಗಿರುವ ಸಾಯಿಕೃಷ್ಣ ಜಗಲಿ ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾಗಿದ್ದು, ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮನೋರಂಜರ್‌ ಡೈರಿಯಲ್ಲಿ ಸಾಯಿ ಕೃಷ್ಣ ಹೆಸರು ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.

Share Post