CrimeDistricts

ಪ್ರಿಯತಮೆಯ ಮದುವೆ ದಿನವೇ ಪ್ರಿಯಕರನ ಹತ್ಯೆ

ಬೀದರ್ ; ಅವರಿಬ್ಬರೂ ಲವ್ ಮಾಡುತ್ತಿದ್ದರು.. ಆದ್ರೆ ಯುವತಿಯ ಮನೆಯವರು ಬೇರೆಯವನ ಜೊತೆ ಮದುವೆ ಫಿಕ್ಸ್ ಮಾಡಿದ್ದರು.. ಇವತ್ತು ಆಕೆಗೆ ಮದುವೆ ಇತ್ತು.‌. ಇದೇ ದಿನವೇ ಪ್ರಿಯತಮನ ಕೊಲೆ ಆಗಿದೆ.. ರೈಲ್ವೆ ಹಳಿ ಮೇಲೆ ತಲೆ ತುಂಡರಿಸಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ..

  ಬೀದರ್ ನಗರದ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ 22 ವರ್ಷದ ಯುವಕ ವೆಂಕಟೇಶ್ ಕುಮಾರ್ ಶವ ಪತ್ತೆಯಾಗಿದೆ..  ರೈಲ್ವೆ ಹಳಿ ಮೇಲೆ ವೆಂಕಟೇಶ ಕುಮಾರ್ ತುಂಡರಿಸಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ವೆಂಕಟೇಶ್ ಕುಮಾರ್  ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದವನು ಎಂದು ತಿಳಿದುಬಂದಿದೆ.. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ 3 ವರ್ಷದಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಆಕೆಗೆ ಬೇರೆಯವನ ಜೊತೆ ಇಂದು ಮದುವೆಯಾಗಿದೆ.

 

Share Post