BengaluruCrime

ಗಂಡ-ಹೆಂಡತಿ ಜಗಳದಲ್ಲಿ ಬಾಮೈದ ಕೊಲೆಯಾಗಿ ಹೋದ!

ಬೆಂಗಳೂರು; ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ.. ಆದ್ರೆ ಇಲ್ಲಿ ಗಂಡ-ಹೆಂಡತಿಯ ಜಗಳ ಬಾಮೈದನನ್ನು ಕೊಲೆ ಮಾಡುವ ತನಕ ಹೋಗಿದೆ.. ಜಗಳ ಬಿಡಿಸಲು ಹೋದ ಬಾಮೈದ ದಾರುಣವಾಗಿ ಬಾವನಿಂದಲೇ ಕೊಲೆಯಾಗಿ ಹೋಗಿದ್ದಾನೆ.

ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್‌ ಅಪಘಾತದಲ್ಲಿ 11 ಮಂದಿ ದುರ್ಮರಣ!

ಕೌಟುಂಬಿಕ ಕಲಹದ ಹಿನ್ನೆಲೆ ಜಗಳ;

ಬೆಂಗಳೂರಿನ ಕೆಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 32 ವರ್ಷದ ಕಿರಣ್‌ ಕುಮಾರ್‌ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸ್ವಂತ ಬಾವನೇ ಈ ಕೊಲೆ ಮಾಡಿರುವುದು ದುರದೃಷ್ಟಕರ ಘಟನೆ.. ಗಂಡ-ಹೆಂಡತಿ ಇಬ್ಬರೂ ಹಬ್ಬದ ದಿನವೂ ಜಗಳ ಆಡುತ್ತಿರುವುದರಿಂದ ನೋಡಿದ ಬಾಮೈದ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಬಾವ ಕೋಪಗೊಂಡ ಬಾಮೈದ ಮೇಲೆ ಚಾಕು ಬೀಸಿ ಕೊಲೆ ಮಾಡಿದ್ದಾನೆ…

ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!

ಬಾವ ಲಕ್ಷ್ಮಣ್‌ ಎಂಬಾತನಿಂದ ಕೃತ್ಯ;

ಲಕ್ಷ್ಮಣ್‌ ಎಂಬಾತ ದಿನವೂ ಪತ್ನಿಯ ಜೊತೆ ಜಗಳ ಮಾಡುತ್ತಿದ್ದ.. ಪ್ರತಿದಿನವೂ ಗಂಡ-ಹೆಂಡತಿ ನಡುವೆ ಜಗಳ ಇದ್ದೇ ಇರುತ್ತಿತ್ತು.. ಹಬ್ಬದ ದಿನವೂ ಮಧ್ಯಾಹ್ನ ಯಾವುದೋ ವಿಚಾರಕ್ಕೆ ದೊಡ್ಡ ರಂಪಾದ ನಡೆದಿದೆ.. ಅದು ವಿಕೋಪಕ್ಕೆ ತಿರುಗುತ್ತಿರುವುದನ್ನು ನೋಡಿದ ಬಾಮೈದ ಕಿರಣ್‌ ಕುಮಾರ್‌ ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಬಾವ ಕೋಪಗೊಂಡು ಬಾಮೈದನಿಗೆ ಚಾಕುನಿಂದ ಎಲ್ಲೆಂದರಲ್ಲಿ ಇರಿದಿದ್ದಾನೆ.. ಇದರಿಂದಾಗಿ ಕಿರಣ್‌ ಕುಮಾರ್‌ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು!;

ಬಾವ ಲಕ್ಷ್ಮಣ್‌ ಕೋಪದಲ್ಲಿ ಬಾಮೈದ ಕಿರಣ್‌ ಕುಮಾರ್‌ಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದ. ಅನಂತರ ಕಿರಣ್‌ ಕುಮಾರ್‌ನನ್ನು ಅಂಬೇಡ್ಕರ್‌ ಆಸ್ಪತ್ರೆಗೆ ಸೇರಿಸಲಾಯಿತು.. ಆದ್ರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಕಿರಣ್‌ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.. ಪೊಲೀಸರು ಪರಿಶೀಲನೆ ಮಾಡಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಸಿಎಂ ಪ್ರಚಾರದ ವೇಳೆ ಭದ್ರತಾಲೋಪವಾಗಿಲ್ಲ; ಪೊಲೀಸ್ ಇಲಾಖೆ ಸ್ಪಷ್ಟನೆ

 

Share Post