BengaluruCrime

ಅಗ್ನಿ ಅವಘಡ; ಕುರಿ, ಕೋಳಿ ಹಾಗೂ ಮೊಲಗಳು ಸಾವು

ಬೆಂಗಳೂರು; ಕುರಿ ಶೆಡ್‌ಗೆ ಆಕಸ್ಮಿಕ ಬೆಂಕಿ ಬಿದ್ದು ಕುರಿ, ಕೋಳಿ ಹಾಗೂ ಮೊಲಗಳು ಅಗ್ನಿಗಾಹುತಿಯಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಟರಾಯನಪುರದ ಶ್ಯಾಮಣ್ಣ ಗಾರ್ಡನ್‌ ಬಳಿಯ ಶೆಡ್‌ನಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ 15 ಕುರಿ, 20 ಕೋಳಿ ಹಾಗೂ ನಾಲ್ಕು ಮೊಲಗಳು ಸಾವನ್ನಪ್ಪಿವೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post