BengaluruPolitics

ಕಾಂಗ್ರೆಸ್‌ಗೆ ಅಖಂಡ ಶ್ರೀನಿವಾಸಮೂರ್ತಿ ಗುಡ್‌ಬೈ

ಬೆಂಗಳೂರು; ಒಂದು ಕಡೆ ಬಿಜೆಪಿಯಿಂದ ಹಲವು ನಾಯಕರು ಹೊರಬರುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲೂ ಅದೇ ಪರಿಸ್ಥಿತಿ ಇದೆ. ಈಗಾಗಲೇ ಕಾಂಗ್ರೆನಿಂದಲೂ ಕೆಲವರು ಹೊರನಡೆದಿದ್ದಾರೆ. ಆ ಸಾಲಿನ ಬೆಂಗಳೂರಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೇರ್ಪಡೆಯಾಗುತ್ತಿದ್ದಾರೆ. ಟಿಕೆಟ್‌ ಪ್ರಕಟವಾಗದಿದ್ದರಿಂದ ಆಕ್ರೋಶಗೊಂಡಿರುವ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್‌ ತೊರೆಯೋದಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಅವರು ಶಿರಸಿಗೆ ಹೋಗಿದ್ದು, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅನಂತರ ಪಕ್ಷಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರು ಅಖಂಡ ಪರವಿದ್ದು, ಡಿಕೆಶಿಯವರು ಬೇರೆಯವರಿಗೆ ಟಿಕೆಟ್‌ ಕೊಡಬೇಕೆಂದಿದ್ದಾರೆ. ಈ ಕಾರಣದಿಂದ ಅಖಂಡ ಅವರು ಪಕ್ಷ ತೊರೆಯುತ್ತದ್ದಾರೆ.

Share Post