BengaluruCrime

ವೇಶ್ಯೆ ಬಳಿ ಹೋಗಿ ಸಿಕ್ಕಿಬಿದ್ದ ನಿಶ್ಚಿತಾರ್ಥವಾಗಿದ್ದ ಟೆಕ್ಕಿ; ಮದುವೆ ಕ್ಯಾನ್ಸಲ್‌!

ಬೆಂಗಳೂರು; ಮದುವೆ ನಿಶ್ಚಯವಾಗಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಎಳೆ ಹುಡುಗಿಯರ ಜೊತೆ ಪಲ್ಲಂಗ ಶೇರ್‌ ಮಾಡಿಕೊಳ್ಳುವ ಆತುರ.. ಹೀಗಾಗಿ ಆತ ವೇಶ್ಯೆಯರ ಮೊರೆ ಹೋಗಿದ್ದ.. ಆತನ ಅದೃಷ್ಟ ಸರಿ ಇರಲಿಲ್ಲ ಅನಿಸುತ್ತೆ.. ಆವತ್ತೇ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಆತ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.. ಈ ಕಾರಣದಿಂದಾಗಿ ಮದುವೆ ಕೂಡಾ ಮುರಿದುಬಿದ್ದಿದೆ.. ಬೆಂಗಳೂರಿನ ಹೊಂಗಸಂದ್ರದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಸರ್ಕಾರ ಬದಲಾದರೂ ಗೃಹಲಕ್ಷ್ಮೀ ಹಣ ಬರುತ್ತೆ!; ಹೇಗೆ ಗೊತ್ತಾ..?

ಮೊನ್ನೆಯಷ್ಟೇ ಹೊಂಗಸಂದ್ರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಬಾಂಗ್ಲಾದೇಶ ಮೂಲದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದರು.. ಈ ವೇಳೆ ಹೊಂಗಸಂದ್ರದವಳೇ ಆದ ಕರಿಷ್ಮಾ, ಶಾಂತಿಪುರದ ಸೂರಜ್‌ ಶಾಹಜೀ ಹಾಗೂ ಬೆಳ್ತಂಗಡಿ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬನನ್ನು ಬಂಧಿಸಲಾಗಿತ್ತು.. ಈ ಸಾಫ್ಟ್‌ವೇರ್‌ ಎಂಜಿನಿಯರ್‌ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಾಸವಿದ್ದು, ಈತ ಎಳೆ ಹುಡುಗಿಯರು ಬೇಕು ಎಂದು ಪಿಂಪ್‌ಗಳಿಗೆ ಹೇಳಿದ್ದ.. ಅದರಂತೆ ಕರಿಷ್ಮಾ ಹಾಗೂ ಸೂರಜ್‌ ಶಾಹಜೀ ಇಬ್ಬರು ಎಳೆ ಹುಡುಗಿಯರನ್ನು ಕರೆಸಿದ್ದರು.. ಈ ಸಾಫ್ಟ್‌ವೇರ್‌ ಎಂಜಿಜಿಯರ್‌ ಆ ಇಬ್ಬರ ಜೊತೆ ಮಂಚವೇರಿದ್ದಾಗಲೇ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟಿದ್ದರು..

ಇದನ್ನೂ ಓದಿ; ಮಾಜಿ ಶಾಸಕನ ಬೆತ್ತಲೆ ಮೆರವಣಿಗೆ ಮಾಡ್ತಾರಂತೆ ಕಾಂಗ್ರೆಸ್‌ ಶಾಸಕ!

ಸಾಫ್ಟ್‌ವೇರ್‌ ಎಂಜಿನಿಯರ್‌ ಗ್ರಾಹಕನಾಗಿ ಅಲ್ಲಿಗೆ ಬಂದು ಸಿಕ್ಕಿಬಿದ್ದಿದ್ದ.. ನಂತರ ಠಾಣಾ ಬೇಲ್‌ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.. ಆದ್ರೆ ಈ ಎಂಜಿನಿಯರ್‌ಗೆ ಮದುವೆ ನಿಶ್ಚಯವಾಗಿತ್ತು.. ಕೆಲವೇ ದಿನಗಳಲ್ಲಿ ಮದುವೆ ಕೂಡಾ ಇತ್ತು.. ಆದ್ರೆ ಯಾವಾಗ ಈತ ವೇಶ್ಯೆಯರ ಬಳಿ ಹೋಗಿ ಸಿಕ್ಕಿಬಿದ್ದಿದ್ದಾನೆ ಎಂಬ ಮಾಹಿತಿ ದೊರೆಯಿತೋ ಆಗ ವಧು ಆತನ ಸಹವಾಸ ಬೇಡ ಎಂದಿದ್ದಾಳೆ.. ಈಗ ಆತನ ಮದುವೆ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ..

Share Post