CrimeDistricts

ದನ ಮೇಯಿಸಲು ಹೋಗಿದ್ದ 14ರ ಬಾಲಕ ಸತ್ತಿದ್ದಾದರೂ ಹೇಗೆ..?

ಶಿವಮೊಗ್ಗ; ದನ ಮೇಯಿಸಲು ಹೋಗಿದ್ದ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.. ಕೃಷಿ ಹೊಂಡದಲ್ಲಿ ಬಾಕನ ಮೃತದೇಹ ಸಿಕ್ಕಿದೆ.. ಅಕಸ್ಮಾತ್‌ ಆಗಿ ಬಿದ್ದು ಸಾವನ್ನಪ್ಪಿದನಾ ಅಥವಾ ಕೊಲೆಯಾ ಎಂಬುದರ ಬಗ್ಗೆ ಅನುಮಾನ ಮೂಡಿದೆ.. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲಕಾಲಕೊಪ್ಪ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ..

14 ವರ್ಷದ ಸಾತ್ವಿಕ್‌ ಮೃತಪಟ್ಟ ಬಾಲಕನಾಗಿದ್ದಾನೆ.. ನಿನ್ನೆ ಸಾತ್ವಿಕ್‌ ದನಗಳನ್ನು ಮೇಯಿಸಿಕೊಂಡು ಬರಲು ತೆರಳಿದ್ದ.. ಆದ್ರೆ ಸಂಜೆಯಾದರೂ ಆತ ಬೇಗ ಬಂದಿರಲಿಲ್ಲ… ಸಂಜೆ ಆತ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುಬಹುದು ಎಂದು ಹೇಳಲಾಗುತ್ತಿದೆ..

ನಿನ್ನೆ ಶಾಲೆಗೆ ರಜೆ ಇದ್ದುದರಿಂದ ಸಾತ್ವಿಕ್‌ ದನಗಳನ್ನು ಮೇಯಿಸಿಕೊಂಡು ಬರಲು ಹೋಗಿದ್ದ ಎಂದು ತಿಳಿದುಬಂದಿದೆ.. ಸಾತ್ವಿಕ್‌ ತಲಕಾಲಕೊಪ್ಪ ಗ್ರಾಮದ ಸುರೇಶ್‌ ಎಂಬುವವರ ಮಗ ಎಂದು ತಿಳಿದುಬಂದಿದೆ.. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post