CrimeDistrictsHealth

ಅಪರೇಷನ್‌ ಮಾಡಲು ಬಂದಿದ್ದ ವೈದ್ಯ ಕುಡಿದು ಫುಲ್‌ ಟೈಟಾಗಿ ಮಲಗಿದ್ದ..!

ಚಿಕ್ಕಮಗಳೂರು; ವೈದ್ಯ ನಿರ್ಲಕ್ಷದಿಂದ ಬಡ ರೋಗಿಗಳು ಸಂಕಷ್ಟ ಅನುಭವಿಸೋದನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಇಲ್ಲಿ ವೈದ್ಯನೊಬ್ಬ ಅದಕ್ಕಿಂತ ಮುಂದೆ ಹೋಗಿದ್ದಾನೆ. ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದ ವೈದ್ಯನೊಬ್ಬ ಕಂಠಪೂರ್ತಿ ಕುಡಿದು ಟೈಟಾಗಿ ಆಪರೇಷನ್‌ ಥಿಯೇಟರ್‌ನಲ್ಲೇ ಮಲಗಿದ್ದಾನೆ. ಇದನ್ನು ನೋಡಿದ ಸಿಬ್ಬಂದಿ ವೈದ್ಯನನ್ನು ಬಚಾವ್‌ ಮಾಡಲು ವಿಷ್ಣುಸೇನಾ ಚಿತ್ರದ ಪಾರ್ಟ್ 2 ಸನ್ನಿವೇಶ ಸೃಷ್ಟಿಸಿ ಹೈಡ್ರಾಮಾ ಮಾಡಿದ್ದಾರೆ.

ಚಿಕ್ಕಮಗಳೂರಿನ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಇಲ್ಲಿ ಸಂತಾನಹರಣ ಕ್ಯಾಂಪ್‌ ಆಯೋಜಿಸಲಾಗಿತ್ತು. ಮಹಿಳೆಯರಿಗೆ ನಿನ್ನೆ ಬೆಳಗ್ಗೆ 8 ಗಂಟೆಗೆ ಬರೋದಕ್ಕೆ ಸೂಚಿಸಲಾಗಿತ್ತು. ಅದರಂತೆ ಹತ್ತಕ್ಕೂ ಹೆಚ್ಚು ಮಹಿಳೆಯರು ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಮಧ್ಯಾಹ್ನ 3 ಗಂಟೆಗೆ ಕೊಪ್ಪದಿಂದ ಸರ್ಕಾರಿ ವೈದ್ಯರೊಬ್ಬರು ಬಂದಿದ್ದಾರೆ. ಆದ್ರೆ ಕುಡಿದು ಟೈಟ್‌ ಆಗಿ ಬಂದಿದ್ದ ವೈದ್ಯ, ಆಪರೇಷನ್‌ ಮಾಡುವ ಬದಲು ಆಪರೇಷನ್‌ ಬೆಡ್‌ ಮೇಲೇ ಮಲಗಿಬಿಟ್ಟಿದ್ದಾನೆ.

ಇನ್ನೊಂದೆಡೆ ವೈದ್ಯ ಬಂದಿದ್ದಾನೆಂದು ಸಿಬ್ಬಂದಿ ಮಹಿಳೆಯರಿಗೆ ಅನಸ್ತೇಷಿಯಾ ಕೊಟ್ಟು ಮಲಗಿಸಿದ್ದಾರೆ. ವೈದ್ಯ ನೋಡಿದರೆ ಎದ್ದೇಳುತ್ತಲೇ ಇರಲಿಲ್ಲ. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪ್ಲ್ಯಾನ್‌ ಮಾಡಿರುವ ಆಸ್ಪತ್ರೆ ಸಿಬ್ಬಂದಿ. ವೈದ್ಯನನ್ನು ಸ್ಪ್ರೆಚರ್‌ ಮೇಲೆ ಮಲಗಿಸಿ ಆಚೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ವಾಪಸ್ ಕೊಪ್ಪಕ್ಕೆ ಕಳುಹಿಸಲಾಗಿದೆ.

Share Post