CrimeDistricts

ಕಾರ್ಕಳದಲ್ಲಿ ಯುವತಿಗೆ ಮಾದಕ ವಸ್ತು ನೀಡಿ ಅತ್ಯಾಚಾರ!

ಉಡುಪಿ(Udupi); ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯನ್ನು ಕರೆಸಿಕೊಂಡು, ಆಕೆಗೆ ಬಿಯರ್‌ನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಕುಡಿಸಿ ಅತ್ಯಾಚಾರ ಎಸಗಲಾಗಿದೆ.. ಅಲ್ತಾಫ್‌ ಎಂಬಾತ ಈ ಕೃತ್ಯ ಎಸಗಿದ್ದು, ಈತನಿಗೆ ಇನ್ನೂ ಇಬ್ಬರು ಸ್ನೇಹಿತರು ಸಹಕರಿಸಿದ್ದಾರೆ ಎನ್ನಲಾಗಿದೆ.. ಹೀಗಾಗಿ, ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.. ಕಾರ್ಕಳ ನಗರದಲ್ಲಿ ಕಳೆದ ಸಂಜೆ ಈ ಘಟನೆ ನಡೆದಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ..

ಇದನ್ನೂ ಓದಿ; ತಡರಾತ್ರಿಯಲ್ಲಿ ನಟಿ ಪಾಯಲ್‌ ಮೇಲೆ ದಾಳಿ!; ಅಲ್ಲಿ ನಡೆದಿದ್ದಾದರೂ ಏನು..?

ನಿನ್ನೆ ರಾತ್ರಿಯೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆಗೊಂಡು ಆಕ್ರೋಶ ಹೊರಹಾಕಿದ್ದಾರೆ.. ಸಂತ್ರಸ್ತೆಗೆ ಆರೋಪಿ ಇನ್ಸ್ಟಾಗ್ರಾಂನಲ್ಲಿ ಮೂರು ತಿಂಗಳಿಂದ ಪರಿಚಯವಾಗಿದ್ದ.. ಅದು ಸ್ನೇಹವಾಗಿ ಬದಲಾಗಿದ್ದು, ಆರೋಪಿ ಫೋನ್‌ ಮಾಡಿ ಆಕೆಯನ್ನು ಕರೆಸಿಕೊಂಡಿದ್ದ.. ನಂತರ ಆಕೆಯನ್ನು ಅಪಹರಿಸಿ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.. ಸಂತ್ರಸ್ತೆಯೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ..

ಇದನ್ನೂ ಓದಿ; ಬಸ್‌ ಪ್ರಯಾಣ ದರ ಏರಿಕೆಯ ಸುಳಿವು ಕೊಟ್ರಾ ಸಾರಿಗೆ ಸಚಿವರು..?

ಇನ್ನು ಆರೋಪಿಗೆ ಬಿಯರ್‌ ಬಾಟೆಲ್‌ ತಂದಕೊಟ್ಟಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಸುಬೇರ್‌ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.. ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ.. ಸಂತ್ರಸ್ತೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾದಕ ಪದಾರ್ಥ ನೀಡಿ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ..

 

Share Post