CrimeDistricts

ಹುಡುಗಿಗಾಗಿ ಬೀದಿ ಕಾಳಗ; ತುಮಕೂರು-ಬೆಂಗಳೂರು ಯುವಕರ ಬಡಿದಾಟ!

ತುಮಕೂರು; ಹುಡುಗಿ ವಿಚಾರಕ್ಕೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ತುಮಕೂರಿನ ಕಾಲೇಜು ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ.. ಬೀದಿಯಲ್ಲೇ ಪರಸ್ಪರ ಹಲ್ಲೆ ನಡೆದಿದೆ.. ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ಈ ಗಲಾಟೆ ನಡೆದಿದ್ದು, ಇದರ ದೃಶ್ಯಗಳು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಈಗ ಈ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ..

ಇದನ್ನೂ ಓದಿ; ಕಾರ್ಕಳದಲ್ಲಿ ಯುವತಿಗೆ ಮಾದಕ ವಸ್ತು ನೀಡಿ ಅತ್ಯಾಚಾರ!

ಮನೋಜ್‌ ಹಾಗೂ ಗಣೇಶ್‌ ಎಂಬುವವರು ಜಯವರ್ಧನ್‌ ಎಂಬ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.. ಜಯವರ್ಧನ್‌ ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾನೆ.. ಮನೋಜ್‌ ಬೆಂಗಳೂರಿನ ಬಿಎಂಎಸ್‌ ಕಾಲೇಜಿನ ಪದವಿ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ.. ಮನೋಜ್‌ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದಾನಂತೆ. ಆದ್ರೆ ಆಕೆಯ ಜೊತೆ ಜಯವರ್ಧನ್‌ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಈ ದಾಳಿ ನಡೆದಿದೆ..

ಇದನ್ನೂ ಓದಿ; ತಡರಾತ್ರಿಯಲ್ಲಿ ನಟಿ ಪಾಯಲ್‌ ಮೇಲೆ ದಾಳಿ!; ಅಲ್ಲಿ ನಡೆದಿದ್ದಾದರೂ ಏನು..?

ನನ್ನ ಹುಡುಗಿ ಜೊತೆ ನೀನ್ಯಾಕೆ ಮಾತನಾಡುತ್ತೀಯ ಎಂದು ಮನೋಜ್‌ ಹಾಗೂ ಆತನ ಸ್ನೇಹಿತ ಜಯವರ್ಧನ್‌ ಮೇಲೆ ಗಲಾಟೆ ಮಾಡಿದ್ದಾನೆ.. ಮುಖಕ್ಕೆ ಗುದ್ದಿದ್ದು, ಹಿಗ್ಗಾಮುಗ್ಗಾ ದಾಳಿ ಮಾಡಲಾಗಿದೆ.. ಈ ವೇಳೆ ಶಾಲಾ ಬಸ್‌ ಚಾಲಕರು ಆರೋಪಿಯನ್ನು ಹಿಡಿದಿದ್ದಾರೆ.. ಮತ್ತೊಬ್ಬ ಆರೋಪಿ ಗಣೇಶ್‌ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.. ಜಯವರ್ಧನ್‌ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

Share Post