BengaluruCrime

ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕ್ಷಣಾರ್ಧದಲ್ಲಿ ಸುಟ್ಟು ಕರಕಲು

ಬೆಂಗಳೂರು; ಕಾರುಗಳು ಇದ್ದಕ್ಕಿಂತೆ ಹೊತ್ತಿ ಉರಿಯುವ ಘಟನೆಗಳು ನಡೆಯುತ್ತಲೇ ಇವೆ. ಕಳೆದ ರಾತ್ರಿ ಕೂಡಾ ಬೆಂಗಳೂರಿನಲ್ಲಿ ಕಾರೊಂದು ಸುಟ್ಟು ಭಸ್ಮವಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಶಿವಾಜಿ ನಗರದ ಬಾಳೇ ಕುಂದ್ರಿ ರಸ್ತೆಯಲ್ಲಿ ನಿನ್ನೆ ರಾತ್ರಿ ಮುಕ್ತಾರ್ ಅಹ್ಮದ್ ಅವರಿಗೆ ಸೇರಿದ ಫೋರ್ಡ್ ವಿಸ್ಟಾ ಕಾರಿಗೆ ಬೆಂಕಿ ತಗುಲಿದೆ. ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾನಕ ಸಿಬ್ಬಂದಿ ಬರುವ ವೇಳೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

 

Share Post