CrimeDistricts

ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ!

ಮಂಗಳೂರು; ದಂಪತಿ ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ನದ ಉರ್ದುಗುಡ್ಡೆಯಲ್ಲಿ ಈ ಘಟನೆ ನಡೆದಿದೆ..
63 ವರ್ಷದ ನೊಣಯ್ಯ ಪೂಜಾರಿ ಹಾಗೂ 46 ವರ್ಷದ ಬೇಬಿ ಆತ್ಮಹತ್ಯೆ ಮಾಡಿಕೊಂಡವರು.. ಕಳೆದ ರಾತ್ರಿ ಮನೆ ಸಮೀಪವಿರುವ ಗುಡ್ಡಕ್ಕೆ ಹೋಗಿರುವ ದಂಪತಿ ಅಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ನೊಣಯ್ಯ ಪೂಜಾರಿಯವರ ಮೊದಲ ಪತ್ನಿ ದಶಕದ ಹಿಂದೆಯೇ ಸಾವನ್ನಪ್ಪಿದ್ದರು.. ಹೀಗಾಗಿ ಬೇಬಿ ಎಂಬುವವರನ್ನು ಎರಡನೇ ಮದುವೆಯಾಗಿದ್ದರು.. ಆದ್ರೆ ಐದಾರು ವರ್ಷದಿಂದ ನೊಣಯ್ಯ ಪೂಜಾರಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು.. ಎಷ್ಟು ಕಡೆ ತೋರಿಸಿದರೂ ವಾಸಿಯಾಗಿರಲಿಲ್ಲ.. ಇದರಿಂದಾಗಿ ನೊಣಯ್ಯ ಪೂಜಾರಿ ಅವರು ನೊಂದಿದ್ದರು.. ಇನ್ನೊಂದೆಡೆ ಎರಡನೇ ಹೆಂಡತಿ ಬೇಬಿ ಅವರಿಗೆ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದರು.. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.. ವೇಣೂರು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..

Share Post