CinemaPolitics

ಪವನ್‌ ಕಲ್ಯಾಣ್‌ ವಿರುದ್ಧ ಪ್ರಕಾಶ್‌ ರೈ ತೀವ್ರ ಆಕ್ರೋಶ

ಬೆಂಗಳೂರು; ತಿರುಪತಿ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಬಳಸಲಾಗಿತ್ತು ಎಂಬ ವಿಚಾರವಾಗಿ ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ನೀಡಿರುವ ಹೇಳಿಕೆಯನ್ನು ನಟ ಪ್ರಕಾಶ್‌ ರಾಜ್‌ ಖಂಡಿಸಿದ್ದಾರೆ.. ಪವನ್‌ ಕಲ್ಯಾಣ್‌ ಮಾಡಿರುವ ಎಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿರುವ ಪ್ರಕಾಶ್‌ ರಾಜ್‌, ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ತಿಮ್ಮಪ್ಪ ಪ್ರಸಾದವಾದ ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿ ಕೊಬ್ಬಿರೋ ತುಪ್ಪ ಬಳಸಿರುವ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ.. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ.. ತಪ್ಪಿತಸ್ಥರನ್ನು ಅರೆಸ್ಟ್‌ ಮಾಡುತ್ತೇವೆ.. ದೇಶದ ಎಲ್ಲಾ ದೇವಾಲಯಗಳ ರಕ್ಷನೇಗೆ ಸನಾತನ ಧರ್ಮ ರಕ್ಷಣಾ ಬೋರ್ಡ್‌ ರಚನೆ ಆಗಬೇಕು ಎಂದು ಪವನ್‌ ಕಲ್ಯಾಣ್‌ ಎಕ್ಸ್‌ ಮಾಡಿದ್ದರು.. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಟ ಪ್ರಕಾಶ್‌ ರಾಜ್‌, ನೀವು ಡಿಸಿಎಂ ಆಗಿರುವ ಆಂಧ್ರಪ್ರದೇಶದಲ್ಲೇ ತಿರುಪತಿ ಇರೋದು.. ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿ.. ಅದು ನಿಮ್ಮ ರಾಜ್ಯದ ವಿಚಾರ.. ಅದನ್ನು ದೇಶಕ್ಕೆ ಯಾಕೆ ವಿಸ್ತರಣೆ ಮಾಡುತ್ತೀರಿ.. ಈಗಾಗಲೇ ದೇಶದಲ್ಲಿ ಕೋಮು ಸಮಸ್ಯೆಗಳಿವೆ.. ಇದರ ನಡುವೆ ಇದಕ್ಕೆ ಕೋಮು ಬಣ್ಣ ಕಟ್ಟಿ ದೇಶಾದ್ಯಂತ ಗಲಭೆ ಎಬ್ಬಿಸಬೇಡಿ ಎಂದು ಹೇಳಿದ್ದಾರೆ..

Share Post