Cinema

ವಿಕ್ರಾಂತ್‌ ರೋಣ ಟ್ರೈಲರ್‌ ರಿಲೀಸ್‌ ಮುಂದೂಡಿಕೆ

ಬೆಂಗಳೂರು : ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್‌ ರೋಣ ಸಿನಿಮಾ ಸಾಕಷ್ಟು ಹೈಪ್‌ಗಳನ್ನು ಹುಟ್ಟಿಹಾಕಿದೆ. ಕಿಚ್ಚ ಸುದೀಪ್‌ ಅಭಿನಯದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಬುರ್ಜ್‌ ಖಲೀಫಾ ಮೇಲೆ ಸಿನಿಮಾದ ಒಂದು ಶೋ ರೀಲ್‌ ಬಿಡುಗಡೆ ಮಾಡಿದ್ದ ಚಿತ್ರತಂಡ ಫೆಬ್ರುವರಿಯಲ್ಲಿ ಥಿಯೆಟ್ರಿಕಲ್‌ ಟ್ರೈಲರ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು.

ಈಗ ಕೋವಿಡ್‌ ಕಾರಣದಿಂದ ಚಿತ್ರಮಂದಿರಗಳಿಗೆ ಪ್ರತ್ಯೇಕ ರೂಲ್ಸ್‌ ಬರುವ ಸಾಧ್ಯತೆ ಇದೆ. ಈಗಾಗಲೇ ಚಿತ್ರಮಂದಿರಗಳಿಗೆ 50-50 ರೂಲ್ಸ್‌ ಬಂದಿದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳು ಕ್ಲೋಸ್‌ ಆದರೂ ಆಗಬಹುದು.

ಬಹುತೇಕ ಬಿಗ್‌ ಬಜೆಟ್‌ ಸಿನಿಮಾಗಳೆಲ್ಲವೂ ಕೋವಿಡ್‌ ಮಹಾಮಾರಿಯ ಕಾರಣದಿಂದ ರಿಲೀಸ್‌ ಡೇಟ್‌ ಮುಂದೂಡಿವೆ. ಇದೇ ಕಾರಣಕ್ಕೆ ವಿಕ್ರಾಂತ್‌ ರೋಣ ಕೂಡ ತನ್ನ ಟ್ರೈಲರ್‌ ರಿಲೀಸ್‌ ಅನ್ನು ಮುಂದೂಡಿದೆ.

ವಿಕ್ರಾಂತ್‌ ರೋಣ ತಂಡ ಸ್ವಲ್ಪ ಡಿಫರೆಂಟ್‌ ಆಗಿ ಪ್ಲಾನ್‌ ಮಾಡಿಕೊಂಡು ಟ್ರೈಲರ್‌ ರಿಲೀಸ್‌ ಮಾಡಲಿದೆ ಎಂದು ತಿಳಿದು ಬಂದಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಸಿನಿಮಾ ರಿಲೀಸ್‌ ಕೂಡ ಮುಂದೂಡಬಹುದು.

Share Post