Districts

ಮೊಬೈಲ್‌ ಹಾಳಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಮೈಸೂರು: ಇತ್ತೀಚಿನ ದಿನಗಳಲ್ಲಿ ಯಾರ ಕೈಯಲು ನೋಡಿದರು ಮೊಬೈಲ್‌. ಅದರಲ್ಲೂ ಇಂದಿನ ಯುವಕರಲ್ಲಿ ಮೊಬೈಲ್‌ಯಾದೇ ಕಾರುಬಾರು ಆಗಿದೆ. ಈಗ ಹುಟ್ಟಿದ ಮಕ್ಕಳು ಕೂಡ ಮೊಬೈಲ್‌ ಹಿಡಿದುಕೊಂಡರೆ ಅವರ ಗಮನ ಆ ಕಡೆಗೆ ಹೋಗುತ್ತದೆ. ಇದೀಗ ಮಕ್ಕಳು ಮೊಬೈಲ್‌ ವ್ಯಸನಿಗಳಾಗಿರುತ್ತಾರೆ. ಮೊಬೈಲ್‌ ಬಳಕೆ ಮಾಡುವುದು ಎಷ್ಟು ಸುಲಭವೋ ಅಷ್ಟೇ ಅನಾಹುತವಾಗುತ್ತದೆ. ಇಲ್ಲೊಬ್ಬ ಯುವಕ ಒಂದಿನ ಮೊಬೈಲ್‌ ಕೈಯಲ್ಲಿ ಇಲ್ಲ ಅಂತಾ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು ಮೈಸೂರಿನ ಯರಗನಹಳ್ಳಿ ನಿವಾಸಿಯ ಹುಡುಗ ಮಹೇಂದ್ರ ತನ್ನ ಮೊಬೈಲ್‌ ಕೆಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಮೊಬೈಲ್‌ ನೀರಿಗೆ ಬಿದ್ದು ಕೆಟ್ಟು ಹೋಗಿತ್ತು. ಹೀಗಾಗಿ ಅದನ್ನು ರಿಪೇರಿ ಮಾಡಿಸಲು ಹಣವಿರಲಿಲ್ಲ. ಇದ್ದರಿಂದ ಜಿಗುಪ್ಸೆಗೊಂಡ ಯುವಕ ಮಹೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಪಕ್ಕದಲ್ಲಿಯೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸಂಬಂಧಿಸಿ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post