CinemaNational

ವಿಕ್ರಾಂತ್‌ ರೋಣ ಚಿತ್ರದ ಪ್ರಚಾರ; ಪ್ರಹ್ಲಾದ್‌ ಜೋಷಿ ಭೇಟಿಯಾದ ನಟ ಸುದೀಪ್‌

ನವದೆಹಲಿ; ಸ್ಯಾಂಡಲ್‌ವುಡ್‌ ಖ್ಯಾತ ನಟ ಸುದೀಪ್‌ ಅವರು ತಮ್ಮ ಹೊಸ ಚಿತ್ರ ವಿಕ್ರಾಂತ್‌ ರೋಣ ಪ್ರಚಾರಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್‌ ಆಗುತ್ತಿರುವ ವಿಕ್ರಾಂತ್‌ ರೋಣ ಚಿತ್ರದ ಪ್ರಚಾರವನ್ನು ದೆಹಲಿಯ ಇಂಡಿಯಾ ಗೇಟ್‌ ಬಳಿ ನಡೆಸಲಾಗುತ್ತಿದೆ. ಇದಕ್ಕಾಗಿ ದೆಹಲಿ ಆಗಮಿಸಿರುವ ಸುದೀಪ್‌, ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪ್ರಲ್ಹಾದ್‌ ಜೋಷಿಯವರ ನಿವಾಸದಲ್ಲೇ ಸುದೀಪ್‌ ಉಪಾಹಾರ ಸೇವಿಸಿದರು.

ವಿಕ್ರಾಂತ್‌ ರೋಣ ಬಹುನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾ ಇದೇ ತಿಂಗಳು 28 ರಂದು ರಿಲೀಸ್‌ ಆಗುತ್ತಿದೆ. ಹೀಗಾಗಿ ಚಿತ್ರದ ಪ್ರಚಾರವನ್ನು ದೇಶಾದ್ಯಂತ ಭರ್ಜರಿಯಾಗಿ ನಡೆಸಲಾಗುತ್ತಿದೆ.

Share Post