CinemaCrime

ರಾಮನಾಗು ರಾವಣನಾದರೆ ಅಂತ್ಯ; ನಟ ಜಗ್ಗೇಶ್‌ ಹೇಳಿದ್ದು ದರ್ಶನ್‌ಗೇನಾ..?

ಬೆಂಗಳೂರು; ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾಗಿರುವ ಬೆನ್ನಲ್ಲೇ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟ್ವೀಟ್‌ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.. ಅವರು ದರ್ಶನ್‌ ಪ್ರಕರಣವನ್ನು ಉದ್ದೇಶಿಸಿಯೇ ಟ್ವೀಟ್‌ ಮಾಡಿದ್ದರೂ ಕೂಡಾ ಎಲ್ಲಿಯೂ ಕೂಡಾ ದರ್ಶನ್‌ ಹೆಸರು ಪ್ರಸ್ತಾಪ ಮಾಡಿಲ್ಲ.. ಮೇಲ್ನೋಟಕ್ಕೆ ಅದು ದರ್ಶನ್‌ ಪ್ರಕರಣವನ್ನು ಉದ್ದೇಶಿಸಿದ ಮಾಡಿದ ಟ್ವೀಟ್‌ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ..

ಕೆಲ ವರ್ಷಗಳ ಹಿಂದೆ ಜಗ್ಗೇಶ್‌ ಹಾಗೂ ದರ್ಶನ್‌ ನಡುವೆ ಮನಸ್ತಾಪವಾಗಿತ್ತು.. ಜಗ್ಗೇಶ್‌ ಅವರು ದರ್ಶನ್‌ ವಿರುದ್ಧ ಏನೋ ಮಾತನಾಡಿದ್ದಾರೆ ಎಂದು ಮೈಸೂರು ಬಳಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್‌ ಅವರನ್ನು ದರ್ಶನ್‌ ಅಭಿಮಾನಿಗಳ ತರಾಟೆಗೆ ತೆಗೆದುಕೊಂಡಿದ್ದನ್ನು ನಾವು ಜ್ಞಾಪಿಸಿಕೊಳ್ಳಬಹುದು..

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾಡಿರುವ ಟ್ವೀಟ್‌ ಇದು; 

ಸರ್ವಆತ್ಮಾನೇನಬ್ರಹ್ಮ
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!
ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ
ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!
ಮದಕ್ಕೆ ಕಾರುಣ್ಯದ ಅರಿವಿಲ್ಲಾ!

Share Post