BengaluruCinemaCrime

ದರ್ಶನ್‌ರ ಅನ್‌ಫಾಲೋ ಮಾಡಿದ ನಟನ ಹೆಂಡತಿ ವಿಜಯಲಕ್ಷ್ಮೀ!

ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಅನೋ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿದೆ.. ಈ ಸಂಬಂಧ ನಟ ದರ್ಶನ್‌, ನಟಿ ಪವಿತ್ರಾಗೌಡ ಸೇರಿ 13 ಮಂದಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಇತ್ತ ಕೇಸ್‌ ವಿಚಾರಣೆ ಚುರುಕುಗೊಳ್ಳುತ್ತಿದ್ದರೆ, ಅತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮೌನಕ್ಕೆ ಜಾರಿದ್ದಾರೆ.. ಪೊಲೀಸ್‌ ತನಿಖೆ ಶುರುವಾದ ಮೇಲೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.. ಈ ಬಗ್ಗೆ ಹೇಳಿಕೆ ಕೂಡಾ ನೀಡಿಲ್ಲ.. ಜೊತೆಗೆ ಅವರ ಇನ್ಸ್ಟಾಗ್ರಾಂ ಪ್ರೊಫೈಲ್‌ ಫೋಟೋ ಡಿಲೀಟ್‌ ಮಾಡಿದ್ದಾರೆ, ಜೊತೆಗೆ ದರ್ಶನ್‌ ಅವರನ್ನು ಅನ್‌ ಫಾಲೋ ಮಾಡಿದ್ದಾರೆ..

ನಟ ದರ್ಶನ್‌ ಅವರ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಎಂಬ ಕಾರಣಕ್ಕಾಗಿ ಅಭಿಮಾನಿ ರೇಣುಕಾಸ್ವಾಮಿಯ ಕೊಲೆ ಮಾಡಲಾಗಿದೆ.. ಇದರಿಂದಾಗಿ ವಿಜಯಲಕ್ಷ್ಮೀಗೆ ಇದು ಶಾಕಿಂಗ್‌ ಎನಿಸಿದೆ ಎನ್ನಲಾಗಿದೆ.. ಹೀಗಿರುವಾಗಲೇ ಅವರು ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. ಜೊತೆಗೆ ಡಿಪಿಯನ್ನೂ ತೆಗೆದುಹಾಕಿದ್ದಾರೆ..

 

Share Post