CrimeDistricts

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದ; ತಾನೂ ಆತ್ಮಹತ್ಯೆಗೆ ಯತ್ನಿಸಿದ

ರಾಮನಗರ; ಪ್ರೀತಿಸಲು ಒಪ್ಪದಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವೆಂಕಟೇಶ್‌ ಹಾಗೂ ಮೇಘನಾ ಗಾಯಗೊಂಡವರು. ಇಬ್ಬರೂ ರಾಮನಗರದ ಸಂಗೀತಾ ಮೊಬೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವೆಂಕಟೇಶ್‌ಗೆ ಮೇಘನಾ ಮೇಲೆ ಲವ್‌ ಆಗಿದೆ. ಮೇಘನಾ ಬಳಿ ಹೋಗಿ ಪ್ರಪೋಸ್‌ ಮಾಡಿದ್ದಾರೆ. ಆದ್ರೆ ಇದಕ್ಕೆ ಮೇಘನಾ ನಿರಾಕರಿಸಿದ್ದಾಳೆ. ಆದರೂ ವೆಂಕಟೇಶ್‌ ಕಾಟ ಕೊಡುವುದನ್ನು ನಿಲ್ಲಿಸಿಲ್ಲ. ಇದರಿಂದಾಗಿ ಮೇಘನಾ ಕೆಲಸ ಬಿಟ್ಟಿದ್ದಾಳೆ.

ಇದರಿಂದ ರೌದ್ರಾವತಾರ ತೋರಿದ ವೆಂಕಟೇಶ್ ಚನ್ನಪಟ್ಟಣದ ಕೋಟೆ ಬಡಾವಣೆಯ ಮೇಘನಾ ಮನೆಗೆ ಬಂದು ಮತ್ತೆ ಪ್ರೀತಿ ಮಾಡುವಂತೆ ಪೀಡಿಸಿದ್ದಾನೆ. ಲವ್ ಮಾಡಲು ನಿರಾಕರಿಸಿದ ಮೇಘನಾಳಿಗೆ ಚಾಕು ಇರಿದಿದ್ದಾನೆ. ಬಳಿಕ ಚಾಕುವಿನಿಂದ ಕತ್ತುಕೂಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

 

Share Post