BengaluruCrime

ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತಿದ್ದ ದರೋಡೆಕೋರರ ಬಂಧನ

ಬೆಂಗಳೂರು; ಪೊಲೀಸ್ ಎಂದು ಹೇಳಿಕೊಂಡು 80 ಲಕ್ಷ ಸುಲಿಗೆ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಸ್ಮಗ್ಲರ್‌ ಗಳನ್ನ ಪೋಲೀಸರು ಬಂಧಿಸಿದ್ದಾರೆ. 2022 ಡಿಸೆಂಬರ್ 27 ನೇ ತಾರೀಖಿನಂದು ಪೋಲೀಸ್‌ ವೇಷದಲ್ಲಿ ಬಂದು ಈ ಕೃತ್ಯ ವೆಸಗಿದ್ದರು.

ಶಾಂತಿನಗರ ಬಸ್ ನಿಲ್ದಾಣದ ಹತ್ತಿರ ಕೆ.ಹೆಚ್.ರಸ್ತೆಯ ಸಿಗ್ನಲ್ ಬಳಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದ 80 ಲಕ್ಷ ಹಣವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ, ಆಂಧ್ರ ಪೊಲೀಸರ ವೇಶದಲ್ಲಿ ಬಂದಂತಹ ನಾಲ್ವರು ಆರೋಪಿಗಳು ಆತನನ್ನ ಅಡ್ಡಗಟ್ಟಿ 80 ಲಕ್ಷ ಹಣವಿದ್ದ ಬ್ಯಾಗನ್ನ ಕೊಂಡು ಹೋಗಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.ಆರೊಪಿಗಳು ತಮ್ಮ ವಾಹನಕ್ಕೆ ನಕಲಿ ನಂಬರ್‌ ಬಳಸಿ ಈ ಕೃತ್ಯ ವೆಸಗಿದ್ದಾರೆ. ಹಣವನ್ನ ಕದ್ದು ನಂತರ ಆರೋಪಿಗಳು ಆ ಹಣವನ್ನ ಮೋಜು ಮಸ್ತಿಯಲ್ಲಿ ತೊಡಗಿಸಿದ್ದಾರೆ.

ಈ ಆರೋಪಿಗಳನ್ನ ಸದ್ಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತಿದ್ದಾರೆ. ಭತಲ್ ಶಿವರಾಮ್, ಶೇಖ್ ಚೆಂಪತಿ, ಶೇಖ್ ಚೆಂಪತಿ ಜಾಕೀರ್ ಬಂಧಿತ ಆರೋಪಿಗಳು. ಇವರು ರಕ್ತ ಚಂದನ ಸ್ಮಗ್ಲಿಂಗ್‌ ಹಾಗೂ ಹಲವು ದರೊಡೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Share Post