BengaluruCrime

ನಾನು ನಂದಿನಿ.. ಖ್ಯಾತಿಯ ವಿಕಾಸ್‌ಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದೇಕೆ..?

ಬೆಂಗಳೂರು; ನಾನು ನಂದಿನಿ.. ಹಾಡಿನ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ಗೆ ಪೊಲೀಸರು ವಾರ್ನಿಂಗ್‌ ಕೊಟ್ಟಿದ್ದಾರೆ.. ಅವರನ್ನು ಪೊಲೀಸ್‌ ಠಾಣೆಗೆ ಕರೆಸಿಕೊಂಡು ಬುದ್ಧಿ ಹೇಳಿ ಕಳುಹಿಸಿದ್ದು, ಇನ್ನೊಮ್ಮೆ ಇಂತಹ ಕಂಟೆಂಟ್‌ ಮಾಡಿದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮುಡಾ ವಿಚಾರದಲ್ಲಿ ನಮ್ಮದೂ ತಪ್ಪಾಗಿದೆ; ಸಿದ್ದರಾಮಯ್ಯ

ವಿಕಾಸ್‌ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಒಂದು ಮಾಡಿದ್ದರು.. ಅದರಲ್ಲಿ ಡ್ರಗ್ಸ್‌ ವಿಚಾರದ ಬಗ್ಗೆ ಮಾತನಾಡಿದ್ದರು.. ಹೀಗಾಗಿ ಬೈಯಪ್ಪನಹಳ್ಳಿ ಪೊಲೀಸರು ಠಾಣೆಗೆ ಕರೆಸಿ, ಯಾವ ಕಂಟೆಂಟ್‌ ಮಾಡಬಾರದು, ಯಾಕೆ ಮಾಡಬಾರದು ಎಂದು ಬುದ್ಧಿ ಹೇಳಿದ್ದಾರೆ.. ಡ್ರಗ್ಸ್‌ ಕಂಟೆಂಟ್‌ ಮಾಡಿದರೆ ಎಂತಹ ಕೇಸ್‌ ಆಗುತ್ತೆ ಎಂಬುದನ್ನೂ ಹೇಳಿ ಎಚ್ಚರಿಸಿ ಕಳುಹಿಸಿದ್ದಾರೆ.. ಮುಚ್ಚಳಿಕೆ ಕೂಡಾ ಬರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂದು ದಂಪತಿ ಆತ್ಮಹತ್ಯೆ!

ವಿಕ್ಕಿಪೀಡಿಯಾ ವಿಕಾಸ್‌ ಅವರು ವಿಭಿನ್ನ ಕಂಟೆಂಟ್‌ಗಳ ಮೂಲಕ ಅವರು ಹೆಸರುವಾಸಿಯಾದವರು.. ನಾನು ನಂದಿನಿ, ಬೆಂಗಳೂರಿಗೆ ಬಂದೀನಿ.. ಎಂಬ ಹಾಡಿನ ಮೂಲಕ ಅವರು ಫೇಮಸ್‌ ಆಗಿದ್ದರು.. ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿರುವ ವಿಕಾಸ್‌, ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ..

Share Post