BengaluruCrime

ಪ್ರಿಯತಮೆ ಜೊತೆ ಗೆಳೆಯನ ಚಾಟಿಂಗ್‌; ಬಸನವಗುಡಿಯಲ್ಲಿ ಯದ್ವಾತದ್ವಾ ಮಚ್ಚು ಬೀಸಿದ ಪ್ರಿಯತಮ!

ಬೆಂಗಳೂರು; ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆಗೆ ಸಲುಗೆ ಬೆಳೆಸಿ ಚಾಟ್‌ ಮಾಡುತ್ತಿದ್ದಕ್ಕೆ ಕುಪಿತಗೋಂಡ ಪ್ರಿಯತಮ, ತನ್ನ ಗೆಳೆಯನ ಮೇಲೆ ಯದ್ವಾತದ್ವಾ ಮಚ್ಚು ಬೀಸಿ ಗಾಯಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.. ಬೆಂಗಳೂರಿನ ಬಸವನಗುಡಿಯ ಬುಲ್‌ ಟೆಂಪಲ್‌ ರಸ್ತೆಯ ಪುಲ್ವಾಡಿ ಫ್ಲವರ್‌ ಶಾಪ್‌ ಬಳಿ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ!

ಶಶಾಂಕ್‌ ಹಾಗೂ ಚಂದನ್‌ ಎಂಬುವವರು ಈ ಕೃತ್ಯ ಎಸಗಿದ್ದಾರೆ.. ಹರ್ಷಿತ್‌ ಎಂಬಾತನ ಬಲಗೈ ಹೆಬ್ಬೆರಳು ಕಟ್‌ ಆಗಿದೆ.. ಜೊತೆಗೆ ಎಡಗೈನ ಮುಂಗೈ ತುಂಡಾಗಿದೆ ಎಂದು ತಿಳಿದುಬಂದಿದೆ.. ಕೂಡಲೇ ಹರ್ಷಿತ್‌ ನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..
ಪೇಪರ್‌ನಲ್ಲಿ ಲಾಂಗ್‌ ಸುತ್ತಿಕೊಂಡು ಬಂದಿದ್ದ ಆರೋಪಿಗಳು, ಇದ್ದಕ್ಕಿದ್ದಂತೆ ಹರ್ಷಿತ್‌ ಮೇಲೆ ದಾಳಿ ಮಾಡಿದ್ದಾರೆ.. ಆರೋಪಿಗಳನ್ನು ಶಂಕರಪುರ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.. ಇತ್ತ ಕಟ್‌ ಆಗಿದ್ದ ಕೈನೊಂದಿಗೆ ಆಸ್ಪತ್ರೆಗೆ ಬಂದಿರುವ ಹರ್ಷಿತ್‌ ಚಿಕಿತ್ಸೆ ಪಡೆಯುತ್ತಿದ್ದಾನೆ..

ಇದನ್ನೂ ಓದಿ; ಅಶ್ಲೀಲ ವಿಡಿಯೋ ಪ್ರಕರಣ; ಇಂದು ರೇವಣ್ಣ ಮನೆಯಲ್ಲಿ ಸ್ಥಳ ಮಹಜರು!

ಹರ್ಷಿತ್, ಶಶಾಂಕ್ ಮತ್ತು ಚಂದನ್ ನಡುವೆ ದ್ವೇಷಕ್ಕೆ ಒಂದು ಯುವತಿ ಕಾರಣ ಎಂದು ತಿಳಿದುಬಂದಿದೆ.. ಬಿಕಾಂ ಮುಗಿಸಿರುವ ಹರ್ಷಿತ್‌ ಕೆಲಸ ಹುಡುಕುತ್ತಿದ್ದ.. ಜೊತೆಗೆ ತಮ್ಮ ತಂದೆಯ ಫ್ಲವರ್‌ ಡೆಕೋರೇಷನ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.. ಇನ್ನು ಅದೇ ಕಟ್ಟಡದಲ್ಲಿ ಡಯಾಗ್ನೋಸ್ಟಿಕ್‌ ಸೆಂಟರ್‌ ಇದ್ದು, ಅದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೊತೆಗೆ ಹರ್ಷಿತ್‌ಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ..

ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!

ಆದ್ರೆ ಅದೇ ಯುವತಿಯನ್ನು ಶಶಾಂಕ್‌ ಪ್ರೀತಿಸುತ್ತಿದ್ದ ಎನ್ನಲಾಗಿದೆ.. ಆದ್ರೆ ಹರ್ಷಿತ್‌ ಹಾಗೂ ಯುವತಿ ನಡುವೆ ಏನೋ ನಡೆಯುತ್ತಿದೆ ಎಂದು ಅನುಮಾನಗೊಂಡಿದ್ದ ಶಶಾಂಕ್‌, ಯುವತಿಯ ಮೊಬೈಲ್‌ ಪರಿಶೀಲನೆ ಮಾಡಿದ್ದಾನೆ.. ಈ ವೇಳೆ ಹರ್ಷಿತ್‌ ಜೊತೆ ಚಾಟ್‌ ಮಾಡಿರುವುದು ಸಿಕ್ಕಿದೆ.. ಇದರಿಂದ ಸಿಟ್ಟಿಗೆದ್ದ ಶಶಾಂಕ್‌ ತನ್ನ ಸ್ನೇಹಿತನೊಂದಿಗೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನಾದಿನಿ ಗಂಡನ ಬರ್ಬರ ಹತ್ಯೆ; ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ ವ್ಯಕ್ತಿ!

Share Post