BengaluruCinemaCrime

ಉಪೇಂದ್ರ ವಿರುದ್ಧದ ಎರಡನೇ ಎಫ್‌ಐಆರ್‌ಗೂ ಮಧ್ಯಂತರ ತಡೆ

ಬೆಂಗಳೂರು; ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತೆ ಎಂಬ ಗಾದೆ ಬಳಸಿ ವಿವಾದಕ್ಕೆ ಸಿಲುಕಿದ್ದ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಕೊನೆಗೂ ಕಾನೂನು ಸಂಕಷ್ಟದಿಂದ ಪಾರಾಗಿದ್ದಾರೆ. ಉಪೇಂದ್ರ ವಿರುದ್ಧ ದಾಖಲಾಗಿದ್ದು, ಮತ್ತೊಂದು ಪ್ರಕರಣಕ್ಕೂ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ಉಪೇಂದ್ರ ಅವರು ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡನೇ ಎಫ್‌ಐಆರ್‌ ಅನ್ನು ಕೂಡಾ ರದ್ದು ಮಾಡುವಂತೆ ಉಪೇಂದ್ರ ಹೈಕೋರ್ಟ್‌ ಮೆಟ್ಟಲೇರಿದ್ದರು. ಕೋರ್ಟ್‌ ಅವರ ಅರ್ಜಿಯನ್ನು ಪುರಸ್ಕರಿಸಿ, ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದೆ. ಒಂದೇ ಹೇಳಿಕೆಗೆ ಹಲವೆಡೆ ದೂರುಗಳನ್ನು ನೀಡಿದ್ದಾರೆ. ಹೀಗಾಗಿ ಎಲ್ಲಾ ದೂರುಗಳಿಗೂ ಮಧ್ಯಂತರ ತಡೆ ನೀಡುವಂತೆ ಉಪೇಂದ್ರ ಪರ ವಕೀಲ ಉದಯ್‌ ಹೊಳ್ಳ ವಾದ ಮಾಡಿದರು.

 

Share Post