CrimePolitics

ಪ್ರಜ್ವಲ್‌ ರೇವಣ್ಣರನ್ನು ವಿದೇಶಕ್ಕೆ ಕಳುಸಿದ್ದೇ ದೇವೇಗೌಡರು; ಸಿದ್ದರಾಮಯ್ಯ!

ಯಾದಗಿರಿ; ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶಕ್ಕೆ ಕಳುಹಿಸಿದ್ದೇ ಮಾಜಿ ಪ್ರಧಾನಿ ದೇವೇಗೌಡರು ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ದೇವತ್ಕಲ್‌ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.. ದೇವೇಗೌಡರು ಯೋಜನೆ ಮಾಡಿ ತಮ್ಮ ಮೊಮ್ಮಗನನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ..

    ಪ್ರಜ್ವಲ್‌ ಪೆನ್‌ ಡ್ರೈವ್‌ ಪ್ರಕರಣಕ್ಕೂ ಡಿ.ಕೆ.ಶಿವಕುಮಾರ್‌ ಅವರಿಗೂ ಯಾವುದೇ ಸಂಬಂಧವಿಲ್ಲ.. ವಿನಾಕಾರಣ ಆರೋಪ ಮಾಡಲಾಗುತ್ತಿದೆ.. ಪ್ರಜ್ವಲ್‌ ವಿರುದ್ಧ ಆರೋಪ ಕೇಳಿಬಂದಾಕ್ಷಣ ಅವರು ವಿದೇಶಕ್ಕೆ ಹಾರಿದ್ದಾರೆ.. ದೇವೇಗೌಡರೇ ಹೇಳಿ ಆತನನ್ನು ವಿದೇಶಕ್ಕೆ ಕಳುಹಿಸಲಾಗಿದೆ.. ವೀಸಾ ಕೊಡುವುದು ಯಾರು..? ಕೇಂದ್ರ ಸರ್ಕಾರವೇ ತಾನೇ ಎಂದು ಬಿಜೆಪಿಯವರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ..

   ಕಾರ್ತೀಕ್‌ ಎಂಬಾತ ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕನಾಗಿದ್ದ.. ಆ ಕಾರ್ತೀಕ್‌ ಪೆನ್‌ಡ್ರೈವ್‌ ಅನ್ನು ಬಿಜೆಪಿ ಮುಖಂಡನ ಕೈಗೆ ಕೊಟ್ಟಿದ್ದ.. ಅದನ್ನು ಆತನೇ ಹೇಳಳಿಕೊಂಡಿದ್ದಾನೆ.. ಆದ್ರೆ ಕುಮಾರಸ್ವಾಮಿಯವರು ರಾಜಕಾರಣ ಮಾಡುವುದಕ್ಕಾಗಿ ಡಿ.ಕೆ.ಶಿವಕುಮಾರ್‌ ಹೆಸರನ್ನು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ವೇಳೆ ಆರೋಪ ಮಾಡಿದ್ದಾರೆ..

 

Share Post