Astrology

ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

ಯುಗಾದಿ.. ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷ.. ಹೀಗಾಗಿ ವಾರ್ಷಿಕ ಭವಿಷ್ಯ ಹಾಗೂ ಪಂಚಾಂಗವನ್ನು ಯುಗಾದಿಯಿಂದ ಯುಗಾದಿವರೆಗೆ ಬರೆಯಲಾಗುತ್ತದೆ.. ಈ ‘ಕ್ರೋಧಿ’ ನಾಮ ಸಂವತ್ಸರದ ವರ್ಷದಲ್ಲಿ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ಐದು ರಾಶಿಯವರಿಗೆ ಶುಭ ಫಲಗಳು ಹೆಚ್ಚು;

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯುಗಾದಿಯಿಂದ ಶುರುವಾಗುವ ಹೊಸ ವರ್ಷದಲ್ಲಿ ಮಂಗಳ ರಾಜನಾದರೆ, ಶನಿಯು ಮಂತ್ರಿಯಾಗುತ್ತಾನೆ. ಇದಲ್ಲದೆ, ಯುಗಾದಿ ಹಬ್ಬದ ಸಮಯದಲ್ಲಿ ಸರ್ವಾರ್ಧ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಪ್ರೀತಿ ಯೋಗ ಕೂಡ ರೂಪುಗೊಳ್ಳುತ್ತದೆ. ಇವು ಅಂದು ಬೆಳಿಗ್ಗೆ 7:30 ಕ್ಕೆ ಪ್ರಾರಂಭವಾಗುತ್ತವೆ ಮತ್ತು ದಿನವಿಡೀ ಇರುತ್ತವೆ. ಈ ಶುಭ ಯೋಗಗಳಿಂದಾಗಿ ಕೆಲವು ರಾಶಿಚಕ್ರದವರ ಆದಾಯ ಅಪಾರ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಐದು ರಾಶಿಯವರು ಯುಗಾದಿ ಹಬ್ಬದಿಂದ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗುತ್ತಾರೆ. ಇದಲ್ಲದೆ, ಲಕ್ಷ್ಮಿ ದೇವಿಯ ಅನುಗ್ರಹ ಕೂಡಾ ಇವರಿಗೆ ವರ್ಷವಿಡೀ ಇರುತ್ತದೆ. ಈ ಯುಗಾದಿಯಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ನೋಡೋಣ ಬನ್ನಿ..

ಇದನ್ನೂ ಓದಿ; ಯೋಗೇಶ್ವರ್‌ ಪುತ್ರಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಎಂದುಬಿಟ್ಟರಾ ಡಿ.ಕೆ.ಶಿವಕುಮಾರ್‌..?

ಮೇಷ ರಾಶಿ;

ಯುಗಾದಿ ಹಬ್ಬದ ದಿನದಿಂದ ಚಂದ್ರನು ಮೇಷ ರಾಶಿಗೆ ಸಾಗುತ್ತಾನೆ. ಗುರುವಿನ ಸ್ನೇಹದಿಂದ ಮೇಷರಾಶಿಯವರಿಗೆ ಗಜಕೇಸರಿ ಯೋಗ ಉಂಟಾಗುತ್ತದೆ. ಈ ಸಮಯದಲ್ಲಿ, ಉದ್ಯೋಗಿಗಳಿಗೆ ಬಡ್ತಿ ಮತ್ತು ವೃತ್ತಿಯಲ್ಲಿ ಪ್ರಗತಿ ಹೊಂದುವ ಅವಕಾಶಗಳು ಹೆಚ್ಚಾಗುತ್ತವೆ. ನಿಮ್ಮ ಬುದ್ಧಿವಂತಿಕೆಯಿಂದ ನೀವು ಉತ್ತಮ ಲಾಭವನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಕೂಡಾ ಈ ವರ್ಷ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ.

ಇದನ್ನೂ ಓದಿ; ನೀರು ಕುಡಿಯಲು ಹೋಗಿ ಟ್ಯಾಂಕ್‌ಗೆ ಬಿದ್ದು 30 ಕೋತಿಗಳ ಸಾವು!

ಕರ್ಕಾಟಕ ರಾಶಿ;

ಕರ್ಕಾಟಕ ರಾಶಿಯವರಿಗೂ ಕೂಡಾ ಯುಗಾದಿ ದಿನದಂದು ಉತ್ತಮ ಫಲಗಳು ಸಿಗಲಿವೆ.. ಎಲ್ಲಾ ಕ್ಷೇತ್ರದ ಜನರಿಗೂ ಸಾಕಷ್ಟು ಒಳ್ಳೆಯದಾಗಲಿದೆ.. ವ್ಯವಹಾರ ಮಾಡಬಯಸುವವರು ಯುಗಾದಿಯ ನಂತರ ಶುರು ಮಾಡಬಹುದು..ಈ ರಾಶಿಯವರು ಹೊಸ ವರ್ಷದಲ್ಲಿ ಚಂದ್ರನ ಪ್ರಭಾವದಿಂದ ಹಲವಾರು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಶನಿಯ ಕೃಪೆಯಿಂದ ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಪಡೆಯುವ ಅವಕಾಶವಿದೆ.

ಇದನ್ನೂ ಓದಿ; ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!

ಸಿಂಹ ರಾಶಿ;

ಸಿಂಹರಾಶಿಯವರಿಗೂ ಈ ವರ್ಷ ಉತ್ತಮ ವಾತಾವರಣವಿದೆ.. ಯಾವುದೇ ಕೆಲಸಕ್ಕೆ ಕೈ ಹಾಕಲಿ ಅದರಲ್ಲಿ ದೊಡ್ಡ ಯಶಸ್ಸು ಸಿಗಲಿದೆ.. ಯಾವುದೇ ಕ್ಷೇತ್ರವರಾದರೂ ಈ ವರ್ಷ ಉತ್ತಮ ಫಲಗಳನ್ನು ಪಡೆಯುತ್ತೀರಿ.. ಇನ್ನು ಪೂರ್ವಿಕರ ಆಸ್ತಿಯಿಂದ ನೀವು ಹೆಚ್ಚು ಲಾಭವನ್ನು ಪಡೆಯುತ್ತೀರಿ. ವಿದೇಶದಲ್ಲಿ ಓದಲು ಪ್ರಯತ್ನಿಸುವವರಿಗೆ ಉತ್ತಮ ಅವಕಾಶಗಳಿವೆ. ಮಕ್ಕಳನ್ನು ಹೊಂದಲು ಬಯಸುವವರಿಗೂ ಸಂತೋಷದ ಸುದ್ದಿ ಸಿಗಲಿದೆ..

ಇದನ್ನೂ ಓದಿ; ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್‌ಗೆ ತವರಲ್ಲಿ ಅದ್ದೂರಿ ಸ್ವಾಗತ!

ಧನು ರಾಶಿ;

ಈ ರಾಶಿಯ ಜನರು ಯುಗಾದಿ ಹೊಸ ವರ್ಷದಲ್ಲಿ ತಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಅವಕಾಶಗಳನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಮಗುವನ್ನು ಹೊಂದಲು ಬಯಸುವವರಿಗೆ ಈ ವರ್ಷ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಆರೋಗ್ಯ ಚೆನ್ನಾಗಿದ್ದರೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ.. ಈ ವರ್ಷ ನೀವು ತೀರ್ಥಯಾತ್ರೆಗೆ ಹೋಗುವ ಸಾಧ್ಯತೆಗಳಿವೆ.

ಇದನ್ನೂ ಓದಿ; ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲೋದೆಷ್ಟು..?

Share Post