AstrologyLifestyle

ಶತ್ರು ಕಾಟ ಜಾಸ್ತಿಯಾಗಿದೆಯಾ..?; ಮನೆಯಲ್ಲಿಯೇ ಹೀಗೆ ಮಾಡಿದರೆ ಸಾಕು ಶತ್ರುನಾಶ ಪಕ್ಕಾ..!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.. ನಾವು ಯಾವುದರಲ್ಲಾದರೂ ಪ್ರಗತಿ ಸಾಧಿಸುತ್ತಿದ್ದೇವೆ ಎಂದರೆ ನಮಗೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತಾ ಹೋಗುತ್ತದೆ. ಮನುಷ್ಯನಿಗೆ ಹೊಟ್ಟೆ ಉರಿ ಜಾಸ್ತಿ. ಬೇರೆಯವರ ಏಳ್ಗೆಯನ್ನು ಮನುಷ್ಯ ಸಹಿಸಲಾರ. ಏನಾದರೂ ಮಾಡಿ ಆತನನ್ನು ತುಳಿಯಬೇಕು ಎಂದು ಮನುಷ್ಯ ಬಯಸುತ್ತಿರುತ್ತಾರೆ.. ಹೀಗಾಗಿ ನಾವು ಆರ್ಥಿಕವಾಗಿ ಬೆಳೆಯುತ್ತಿರುವಾಗ, ನಮ್ಮ ಬ್ಯುಸಿನೆಸ್‌ ದೊಡ್ಡ ಮಟ್ಟಕ್ಕೆ ಹೋಗುತ್ತಿದ್ದಾಗ ಅದಕ್ಕೆ ಅಡ್ಡಿ ಬರುವವರು ಜಾಸ್ತಿಯಾಗುತ್ತಾರೆ. ಇದರಿಂದಾಗಿ ನೂರಾರು ಸಮಸ್ಯೆಗಳು ಎದುರಾಗುತ್ತವೆ.

ನಮ್ಮ ಜೊತೆಗಿರುವವರಿಂದಲೇ ಹೆಚ್ಚು ಸಮಸ್ಯೆ;

ನಮ್ಮ ಜೊತೆಗಿರುವವರಿಂದಲೇ ಹೆಚ್ಚು ಸಮಸ್ಯೆ; ನಮ್ಮ ಏಳ್ಗೆ ಸಮಯದಲ್ಲಿ ಬೆನ್ನಿಗೆ ಚೂರು ಹಾಕುವವರು ಹೆಚ್ಚಾಗಿರುತ್ತಾರೆ. ನಮ್ಮ ಜೊತೆಗೇ ಇರುತ್ತಾರೆ. ನಮ್ಮಿಂದ ಸಹಾಯವನ್ನೂ ಪಡೆಯುತ್ತಿರುತ್ತಾರೆ.. ಆದರೂ ಕೂಡಾ ಹಿಂದಿನಿಂದ ನಮಗೆ ಕೇಡು ಬಯಸುತ್ತಿರುತ್ತಾರೆ. ಇಂತಹವರಿಂದ ಸಂಕಷ್ಟ ಎದುರಾಗೋದು ಗ್ಯಾರೆಂಟಿ.. ಸ್ವಲ್ಪ ಯಾಮಾರಿದರೂ ನಾವು ಮತ್ತೆ ಪಾತಾಳಕ್ಕೆ ಕುಸಿದಿರುತ್ತೇವೆ. ಹೀಗಾಗಿ, ನಮ್ಮ ಹಿತಶತ್ರುಗಳ ಬಗ್ಗೆ ಹೆಚ್ಚಿನ ಗಮನ ಕೊಡೋದು ಇಂಪಾರ್ಟೆಂಟ್‌ ಆಗುತ್ತದೆ. ನಾವು ಬೆಳೆಯುತ್ತಿದ್ದಾಗ, ನಮ್ಮನ್ನು ನೋಡಿ ಅಸೂಯೆ ಪಟ್ಟುಕೊಳ್ಳುವವರು, ನಮಗೆ ತೊಂದರೆ ಕೊಡುವವರು ಹೆಚ್ಚು ಮಂದಿ ಇರುತ್ತಾರೆ. ಇರಬೇಕು ಕೂಡಾ.. ಆದ್ರೆ ಅಂತಹವರಿಂದ ನಮಗೆ ತೊಂದರೆ ಶುರುವಾಗಿದೆ ಎಂದಾದಗ ನಾವು ಅವರನ್ನು ಮಟ್ಟ ಹಾಕಬೇಕಾಗುತ್ತದೆ. ಕೆಲವೊಂದು ಸಮಯದಲ್ಲಿ ಬುದ್ಧಿ ಮಾತು ಹೇಳಿ ಮಟ್ಟ ಹಾಕಬೇಕು, ಬೆದರಿಕೆ ಹಾಕಿ ಮಟ್ಟ ಹಾಕಬಹುದು.. ಇದೆಲ್ಲವನ್ನೂ ಮಾಡಿದರೂ ಸಾಧ್ಯವಾಗದಿದ್ದಾಗ ನಾವು, ಪೂಜೆ, ಪುನಸ್ಕಾರದ ಮೂಲಕ ಶತ್ರು ಬಾಧೆ ಕಡಿಮೆ ಮಾಡಿಕೊಳ್ಳಬಹುದು.

ಶತ್ರು ದೃಷ್ಟಿಗಳಲ್ಲಿ ಅನೇಕ ವಿಧಗಳಿವೆ;

ಶತ್ರು ದೃಷ್ಟಿಗಳಲ್ಲಿ ಅನೇಕ ವಿಧಗಳಿವೆ; ನಮ್ಮ ವ್ಯವಹಾರಗಳ ಮೇಲೆ ಶತ್ರುಗಳ ದೃಷ್ಟಿ ಬಿತ್ತು ಅಂದರೆ ನಮಗೆ ಅನೇಕ ತೊಂದರೆಗಳು ಶುರುವಾಗುತ್ತವೆ. ಹೀಗಾಗಿ ಇಂತಹ ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕ. ಅಂದಹಾಗೆ ಶತ್ರು ದೃಷ್ಟಿಗಳಲ್ಲಿ ಹಲವಾರು ವಿಧಗಳಿವೆ. ಬಂಧು ಶತ್ರು ದೃಷ್ಟಿ, ಸ್ತ್ರೀ ಶತ್ರು ದೃಷ್ಟಿ, ಪುರುಷ ಶತ್ರು ದೃಷ್ಟಿ ಹಾಗೂ ವ್ಯಾವಹಾರಿಕ ಸ್ಥಳಗಳಲ್ಲಿ ಶತ್ರು ದೃಷ್ಟಿ ಹೀಗೆ ನಾನಾ ರೀತಿಯಲ್ಲಿ ಅವುಗಳನ್ನು ವಿಂಗಡಣೆ ಮಾಡಬಹುದು. ಯಾವುದೇ ಶತ್ರು ದೃಷ್ಟಿ ಬಿದ್ದರೂ ನಮಗೆ ತೊಂದರೆಯಾಗಲಿದೆ. ಇದನ್ನು ನಿವಾರಿಸಿಕೊಳ್ಳಲು ಪೂಜೆಯ ಮೊರೆ ಹೋಗಬೇಕಾದುದು ತುಂಬಾನೇ ಮುಖ್ಯವಾಗುತ್ತದೆ.

ಶತ್ರುಗಳು ಇದ್ದರೇನೇ ಸಾಧನೆ ಸಾಧ್ಯ;

ಶತ್ರುಗಳು ಇದ್ದರೇನೇ ಸಾಧನೆ ಸಾಧ್ಯ; ನಮಗೆ ಶತ್ರುಗಳು ಇದ್ದರೆ ಮಾತ್ರ ನಮ್ಮ ಏಳ್ಗೆ ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಅದೇ ಶತ್ರುಗಳಿಂದ ನಮಗೆ ಹೆಚ್ಚಿನ ಕಾಟ ಶುರುವಾದರೆ ಎದನ್ನು ಎದುರಿಸುವುದು ತುಂಬಾನೇ ಕಷ್ಟವಾಗುತ್ತದೆ. ಅದೂ ಕೂಡಾ ಕೆಲವು ಶತ್ರುಗಳು ನಮ್ಮ ಪ್ರಾಣವನ್ನು ತೆಗೆಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಶತ್ರುಕಾಟ ವಿಪರೀತವಾಗಿ ಮೃತ್ಯು ಕಂಟಕವೂ ಆಗಬಹುದು. ಹೀಗಾಗಿ ನಮ್ಮ ಮನೆಯಲ್ಲಿನ ವಸ್ತುಗಳನ್ನೇ ಬಳಸಿಕೊಂಡು ನಾವು ಶತ್ರು ಕಂಟಕವನ್ನು ತಪ್ಪಿಸಿಕೊಳ್ಳಬಹುದು.

ಮೂರು ಎಣ್ಣೆಗಳಿಂದ ಶತ್ರುನಾಶ ಮಾಡಿ;

ಮೂರು ಎಣ್ಣೆಗಳಿಂದ ಶತ್ರುನಾಶ ಮಾಡಿ; ಜ್ಯೋತಿಷಿಗಳು ಹೇಳುವ ಪ್ರಕಾರ ಮೂರು ಎಣ್ಣೆಗಳನ್ನು ಬಳಸಿದರೆ ನಮ್ಮ ಶತ್ರುಗಳ ನಾಶವಾಗುತ್ತದೆ. ಅವು ಯಾವುವೆಂದರೆ ಎಳ್ಳೆಣ್ಣೆ, ಹರಳೆಣ್ಣೆ ಹಾಗೂ ಬೇವಿನ ಎಣ್ಣೆ. ಎಳ್ಳು ಹಾಗೂ ಅರಳು ಶನಿತತ್ವವನ್ನು ತೋರುತ್ತದೆ. ಹೀಗಾಗಿ ಪೂಜೆ ಈ ಮೂರು ಎಣ್ಣೆಗಳನ್ನು ಬಳಸಬೇಕು. ಈ ಮೂರನ್ನೂ ಮಿಶ್ರಣ ಮಾಡಿದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಪಾರ್ವತಿಗೆ ಹೋಲಿಕೆ ಮಾಡಲಾಗುತ್ತದೆ. ಮಿಶ್ರಣ ಮಾಡಿದ ಈ ಮೂರು ಎಣ್ಣೆಗಳನ್ನು ಶನಿ, ರಾಹು ಹಾಗೂ ಕೇತುವಿಗೆ ಕೂಡಾ ಹೋಲಿಸಲಾಗುತ್ತದೆ.

ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಪೂಜೆ;

ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಪೂಜೆ; ಈ ಮೂರು ಎಣ್ಣೆಗಳನ್ನು ಮಿಶ್ರಣ ಮಡಿ ಒಂದು ಕ್ಯಾನ್‌ ನಲ್ಲಿ ಇಟ್ಟುಕೊಳ್ಳಿ. ಅದನ್ನು ಯಾವಾಗಲೂ ಪೂಜೆ ಕೊಠಡಿಯಲ್ಲೇ ಇಡಿ. ಪ್ರತಿ ಭಾನುವಾರ. ಮಂಗಳವಾರ ಹಾಗೂ ಶುಕ್ರವಾರದಂದು ಪೂಜೆ ಮಾಡಿ. ಅಂದರೆ ಈ ಮೂರೂ ದಿನಗಳಂದು ಎಲ್ಲರೂ ಮಲಗಿರುವ ಸಮಯದಲ್ಲಿ ರಾತ್ರಿ ವೇಳೆ ಈ ಎಣ್ಣೆಯ ದೀಪ ಹಚ್ಚಿರಿ. ಕೆಂಪು ಬತ್ತಿಯಿಂದ ದೀಪ ಹಚ್ಚುವುದರಿಂದ ಶತ್ರುಗಳು ನಾಶವಾಗುತ್ತದೆ. ಎಂತಹದ್ದೇ ಶತ್ರುವಾಗಿದ್ದರೂ 9 ವಾರ ಈ ರೀತಿ ಪೂಜೆ ಮಾಡಿದರೆ, ಆತ ನಮ್ಮ ಮಾತು ಕೇಳಲು ಶುರು ಮಾಡುತ್ತಾನೆ. ನಮಗೆ ಸ್ನೇಹಿತನಾಗಿ ಬದಲಾಗುತ್ತದೆ. ಪೂಜೆಯ ಕೋಣೆಯಲ್ಲಿ ಕೆಂಪು ಬತ್ತಿಯಿಂದ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚಬೇಕು. ಆಗ ಶತ್ರುಗಳು ನಾಶವಾಗುತ್ತಾರೆ. ಈ ವೇಳೆ ನಿಮಗೆ ದುರ್ಗೆಯ ಅನುಗ್ರಹ ಕೂಡಾ ದೊರೆಯುತ್ತದೆ.

Share Post